ನೀವು ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸಿರುವಿರಾ? ವಸ್ತುತಃ ನಿಮ್ಮಲ್ಲಿ ಯಾರೆಲ್ಲ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರೂ ಅದಕ್ಕಾಗಿ ಸಹನೆ ಪಡುವವರಿದ್ದಾರೆಂದು ಅವನು ಇನ್ನೂ ಕಾಣಲೇ ಇಲ್ಲ.
ಮುಹಮ್ಮದ್(ಸ) ಓರ್ವ ಸಂದೇಶವಾಹಕರು ಮಾತ್ರ ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿದ್ದಾರೆ. ಅವರು ಮೃತಪಟ್ಟರೆ ಅಥವಾ ಹುತಾತ್ಮರಾದರೆ ನೀವು ಇಸ್ಲಾಮಿನಿಂದ ಮರಳಿ ಹೋಗುವಿರಾ? ಮತ್ತು ಯಾರಾದರೂ ಹಿಂದಕ್ಕೆ ಮರಳಿ ಹೋಗುವುದಾದರೆ ಅವನು ಅಲ್ಲಾಹನಿಗೆ ಯಾವ ಹಾನಿಯನ್ನು ಮಾಡಲಾರನು. ಸಧ್ಯದಲ್ಲೇ ಕೃತಜ್ಞತೆ ತೋರುವವರಿಗೆ ಅಲ್ಲಾಹನು ಉತ್ತಮ ಪ್ರತಿಫಲವನ್ನು ನೀಡಲಿದ್ದಾನೆ.
ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ಜೀವಿಯು ಮರಣಹೊಂದಲಾರದು. ಅದು ನಿರ್ಧರಿತ ಅವಧಿಯಾಗಿದೆ. ಐಹಿಕ ಪ್ರತಿಫಲವನ್ನು ಬಯಸುವವರಿಗೆ ನಾವು ಅದರಿಂದ ಅಲ್ಪವನ್ನು ನೀಡುತ್ತೇವೆ ಮತ್ತು ಪರಲೋಕದ ಪ್ರತಿಫಲವನ್ನು ಬಯಸುವವರಿಗೆ ನಾವು ಅದನ್ನು ನೀಡುತ್ತೇವೆ. ಕೃತಜ್ಞತೆ ತೋರುವವರಿಗೆ ನಾವು ಶೀಘ್ರವಾಗಿ ಉತ್ತಮ ಪ್ರತಿಫಲವನ್ನು ಕರುಣಿಸಲಿದ್ದೇವೆ.
(ಇದಕ್ಕಿಂತ ಮುಂಚೆ) ಅದೆಷ್ಟೂ ಪೈಗಂಬರರು (ಗತಿಸಿಹೋಗಿದ್ದಾರೆ) ಅಲ್ಲಾಹನ ಅದೆಷ್ಟೂ ಭಕ್ತರು ಯುದ್ಧ ಮಾಡಿದ್ದಾರೆ! ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಸಾಕಷ್ಟು ಬವಣೆಗಳನ್ನು ಎದುರಿಸಬೇಕಾಯಿತು. ಆದರೆ ಅವರು ಎದೆಗುಂದಲಿಲ್ಲ, ಮತ್ತು ಬಲಹೀನರಾಗಲಿಲ್ಲ ಹಾಗೂ ಕೀಳರಿಮೆ ತೋರಲಿಲ್ಲ ಮತ್ತು ಅಲ್ಲಾಹನು ಸಹನಾಶೀಲರನ್ನು ಪ್ರೀತಿಸುತ್ತಾನೆ.
(ಆ ಸತ್ಯವಿಶ್ವಾಸಿಗಳು) ಓ ನಮ್ಮ ಪ್ರಭೂ, ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ಕಾರ್ಯಗಳಲ್ಲಿ ಉಂಟಾದAತಹ ಅತಿಕ್ರಮಗಳನ್ನು ಮನ್ನಿಸು ಮತ್ತು ನಮ್ಮ ಪಾದಗಳನ್ನು ನೆಲಯೂರಿಸು ಮತ್ತು ನಮಗೆ ಸತ್ಯ ನಿಷೇಧಿ ಜನತೆಯ ವಿರುದ್ಧ ಸಹಾಯವನ್ನು ನೀಡು ಎಂದೇ ಅವರು ಪ್ರಾರ್ಥಿಸುತ್ತಿದ್ದರು.