ಇದಕ್ಕಿಂತ ಮುಂಚೆ ಜನರ ಮಾರ್ಗದರ್ಶನಕ್ಕಾಗಿ ತೌರಾತ್ ಹಾಗೂ ಇಂಜೀಲನ್ನು ಅವತೀರ್ಣಗೊಳಿಸಿದನು. ಮತ್ತು ಅವನೇ ಸತ್ಯಾಸತ್ಯತೆಯ ಮಾನದಂಡವಾಗಿ ಖುರ್ಆನನ್ನು ಅವತೀರ್ಣಗೊಳಿಸಿರುತ್ತಾನೆ. ಖಂಡಿತವಾಗಿಯು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸಿದವರಿಗೆ ಉಗ್ರ ಶಿಕ್ಷೆ ಇದೆ. ಮತ್ತು ಅಲ್ಲಾಹನು ಪ್ರತಾಪಶಾಲಿಯು, ಪ್ರತಿಕಾರ ತೀರಿಸಿಕೊಳ್ಳುವವನು ಆಗಿದ್ದಾನೆ.
ಓ ಪೈಗಂಬರರೇ ಅವನೇ ನಿಮ್ಮ ಮೇಲೆ ಗ್ರಂಥವನ್ನು ಅವತೀರ್ಣಗೊಳಿಸಿದನು. ಅದರಲ್ಲಿ ಸುಸ್ಪಷ್ಟವಾದ ಸದೃಢ ಸೂಕ್ತಿಗಳಿವೆ ಅವು ಗ್ರಂಥದ ಮೂಲವಾಗಿವೆ ಮತ್ತು ಕೆಲವು ಅಸ್ಪಷ್ಟ (ಬಹು ಅರ್ಥದ) ಸೂಕ್ತಿಗಳಿವೆ ಆದರೆ ಹೃದಯಗಳಲ್ಲಿ ವಕ್ರತೆ ಇರುವವರು ಗೊಂದಲವನ್ನುAಟು ಮಾಡಲು ಮತ್ತು ಅವುಗಳ ದುರ್ವ್ಯಾಖ್ಯಾನದ ಉದ್ದೇಶದಿಂದ ಪರಸ್ಪರ ಅಸ್ಪಷ್ಟವಿರುವ ಸೂಕ್ತಿಗಳನ್ನು ಅನುಸರಿಸುತ್ತಾರೆ. ವಸ್ತುತಃ ಅವುಗಳ ನೈಜ ವ್ಯಾಖ್ಯಾನವು ಅಲ್ಲಾಹನ ಹೊರತು ಇನ್ನಾರಿಗೂ ತಿಳಿದಿಲ್ಲ. ನಿಖರ ಹಾಗೂ ಸದೃಢ ಜ್ಞಾನವುಳ್ಳವರು, ನಾವು ಅವುಗಳಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವು ನಮ್ಮ ಪ್ರಭುವಿನ ಕಡೆಯಿಂದಾಗಿದೆ ಎಂದೇ ಹೇಳುತ್ತಾರೆ. ಮತ್ತು ಕೇವಲ ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.
ನಮ್ಮ ಪ್ರಭುವೇ ನಮ್ಮನ್ನು ಸನ್ಮಾರ್ಗದಲ್ಲಿ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸಬೇಡ ಮತ್ತು ನಿನ್ನ ವತಿಯಿಂದ ಕಾರುಣ್ಯವನ್ನು ನಮಗೆ ದಯಪಾಲಿಸು. ನಿಸ್ಸಂಶಯವಾಗಿಯೂ ನೀನು ಮಹಾ ಉದಾರಿಯಾಗಿರುವೆ.
ಓ ನಮ್ಮ ಪ್ರಭುವೇ, ನಿಸ್ಸಂಶಯವಾಗಿಯು ನೀನು ಮನುಷ್ಯರನ್ನೆಲ್ಲ ಒಂದು ದಿನ ಒಟ್ಟುಗೂಡಿಸಲಿರುವೆ. ಆ ದಿನ ಬರುವುದರ ಬಗ್ಗೆ ಯಾವುದೇ ಸಂದೇಹÀವಿಲ್ಲ. ಖಂಡಿತವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.