[1] ಕಪಟವಿಶ್ವಾಸಿಗಳು ಅಲ್ಲಾಹನನ್ನು, ಅವನ ವಚನಗಳನ್ನು ಮತ್ತು ಸಂದೇಶವಾಹಕರನ್ನು ತಮಾಷೆ ಮಾಡುತ್ತಿದ್ದರು. ಇದು ಸತ್ಯವಿಶ್ವಾಸಿಗಳ ಕಿವಿಗೆ ಬಿದ್ದು ನಂತರ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿದಾಗ ಅವರು ಕಪಟವಿಶ್ವಾಸಿಗಳನ್ನು ಕರೆದು ವಿಚಾರಿಸುತ್ತಿದ್ದರು. ಆಗ ಅವರು ಮೊದಮೊದಲು ನಿರಾಕರಿಸಿದರೂ, ಸಾಕ್ಷ್ಯವನ್ನು ತೋರಿಸಿದಾಗ ಅದನ್ನು ಒಪ್ಪಿಕೊಂಡು, “ನಾವು ಕೇವಲ ಕಾಲಹರಣ ಮಾಡಲು ತಮಾಷೆ ಹೇಳುತ್ತಿದ್ದೆವು” ಎಂದು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದರು. ಅಲ್ಲಾಹು, ಕುರ್ಆನ್ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಹೇಳನ ಮಾಡುವುದು, ಅವರ ಬಗ್ಗೆ ತಿರಸ್ಕಾರದಿಂದ ಮಾತನಾಡುವುದು ಸತ್ಯನಿಷೇಧವೆಂದು ಈ ವಚನದಲ್ಲಿ ತಿಳಿಸಲಾಗಿದೆ.
[1] ಅಂದರೆ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಹಿಂಜರಿಯುತ್ತಾರೆ.