ದೃಷ್ಟಾಂತಗಳನ್ನು ಕಳುಹಿಸುವುದರಿಂದ ನಮ್ಮನ್ನು ತಡೆದಿರುವುದು ಕೇವಲ ಅವುಗಳನ್ನು ಪೂರ್ವಜರು ಸುಳ್ಳಾಗಿಸಿಬಿಟ್ಟಿದ್ದರೆಂಬ ಸಂಗತಿಯಾಗಿದೆ ನಾವು ಸಮೂದ್ ಜನಾಂಗಕ್ಕೆ ಸ್ಪಷ್ಟ ದೃಷ್ಟಾಂತವಾಗಿ ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರೊಂದಿಗೆ ಅಕ್ರಮವೆಸಗಿದರು ಮತ್ತು ನಾವು ಭಯ ಹುಟ್ಟಿಸಲೆಂದೇ ದೃಷ್ಟಾಂತಗಳನ್ನು ಕಳುಹಿಸುತ್ತೇವೆ.
(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮ ಪ್ರಭು ಜನರನ್ನು ಸುತ್ತುವರೆದಿದ್ದಾನೆ ಎಂದು ನಾವು ನಿಮಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿದಂತಹ ಆ ದೃಶ್ಯವು (ಮೇರಾಜ್ನ್ ರಾತ್ರಿ) ಜನರಿಗೆ ಸ್ಪಷ್ಟ ಪರೀಕ್ಷೆಯೇ ಆಗಿತ್ತು ಮತ್ತು ಕುರ್ಆನಿನಲ್ಲಿ ಶಪಿಸಲ್ಪಟ್ಟ ಆ ವೃಕ್ಷವು ಸಹ. ನಾವು ಅವರನ್ನು ಹೆದರಿಸುತ್ತಲೇ ಇದ್ದೇವೆ. ಆದರೆ ಅದು ಅವರಿಗೆ ಮಹಾ ಅತಿಕ್ರಮವನ್ನೇ ಹೆಚ್ಚಿಸುತ್ತಿದೆ.
ನಾವು ಮಲಕ್ಗಳಿಗೆ: ನೀವು ಆದಮನಿಗೆ ಸಾಷ್ಟಾಂಗವೆರಗಿರಿ ಎಂದು ಆದೇಶ ನೀಡಿದ ಸಂದರ್ಭ ಆಗ ಇಬ್ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ಹೇಳಿದನು: ನೀನು ಮಣ್ಣಿನಿಂದ ಸೃಷ್ಟಿಸಿದವನಿಗೆ ನಾವು ಸಾಷ್ಟಾಂಗವೆರಗಬೇಕೇ?
ಮತ್ತು ಹೇಳಿದನು ನೋಡು, ನೀನು ನನ್ನ ಮೇಲೆ ಶ್ರೇಷ್ಟತೆಯನ್ನು ನೀಡಿದ ವ್ಯಕ್ತಿ ಇವನಾಗಿದ್ದಾನೆ. ಆದರೆ ನೀನೇನಾದರೂ ನನಗೆ ಪ್ರಳಯ ದಿನದವರೆಗೆ ಕಾಲಾವಕಾಶ ನೀಡಿದರೆ ನಾನು ಕೆಲವರ ಹೊರತು ಇಡೀ ಅವನ ಸಂತತಿಯನ್ನು ಬೇರು ಸಹಿತ ಕಿತ್ತೆಸೆಯುವೆನು.
ಅವರಲ್ಲಿ ನಿನಗೆ ಸಾಧ್ಯವಿರುವವರನ್ನೆಲ್ಲಾ ನಿನ್ನ ಸ್ವರದಿಂದ ದಾರಿಗೆಡಿಸು. ಅವರ ಮೇಲೆ ನಿನ್ನ ಸವಾರರನ್ನು ಹಾಗೂ ಕಾಲಾಳುಗಳನ್ನು ಎರಗಿಸು ಮತ್ತು ಅವರ ಸಂಪತ್ತು ಹಾಗೂ ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು ಮತ್ತು ಅವರಿಗೆ ವಾಗ್ದಾನಗಳನ್ನು ನೀಡು, ಶೈತಾನನು ಅವರಿಗೆ ವಂಚನೆಯ ಹೊರತು ಬೇರಾವ ವಾಗ್ದಾನವನ್ನು ಮಾಡಲಾರ.