ಅಥವಾ ನಿಮ್ಮ ಹೃದಯಗಳಲ್ಲಿ ಅತ್ಯಂತ ಕಠಿಣವೆಂದು ತೋರುವ ಯಾವುದೇ ಸೃಷ್ಟಿಯಾಗಿರಿ. ನಂತರ ಅವರು ತಕ್ಷಣ ಕೇಳುವರು: ನಮ್ಮನ್ನು ಮರಳಿಸುವವರಾರು? ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದವನೆಂದು ಉತ್ತರಿಸಿರಿ. ಆಗ ಅವರು ತಮ್ಮ ತಲೆಗಳನ್ನು ತೂಗುತ್ತಾ ಹೇಳುವರು. ಸರಿ ಅದು ಯಾವಾಗ ಸಂಭವಿಸುವುದು? ಆಗ ನೀವು ಹೇಳಿರಿ: ಅದು ಸಮೀಪವೇ ಇರಬಹುದು.
(ಓ ಪೈಗಂಬರರೇ) ನೀವು ನನ್ನ ದಾಸರಿಗೆ: ಅವರು ಅತ್ಯುತ್ತಮ ಮಾತನ್ನಾಡಲು ಹೇಳಿರಿ. ವಾಸ್ತವದಲ್ಲಿ ಶೈತಾನನು ಅವರ ನಡುವೆ ಒಡಕು ಹಾಕುತ್ತಾನೆ. ನಿಸ್ಸಂಶಯವಾಗಿಯೂ ಶೈತಾನನು ಮನುಷ್ಯನಿಗೆ ಸ್ಪಷ್ಟ ಶತ್ರುವಾಗಿದ್ದಾನೆ.
. ನಿಮ್ಮ ಪ್ರಭುವು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಇಚ್ಛಿಸಿದರೆ ನಿಮ್ಮ ಮೇಲೆ ಕರುಣೆ ತೋರುವನು ಅಥವಾ ಅವನು ಇಚ್ಛಿಸಿದರೆ ನಿಮ್ಮನ್ನು ಶಿಕ್ಷಿಸುವನು. ನಾವು ನಿಮ್ಮನ್ನು ಅವರ ಮೇಲೆ ಮೇಲ್ನೋಟಗಾರರನ್ನಾಗಿ ಮಾಡಿ ಕಳುಹಿಸಿರುವುದಿಲ್ಲ.
ಮತ್ತು ನಿಮ್ಮ ಪ್ರಭುವು ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲವನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. ನಿಶ್ಚಯವಾಗಿಯೂ ನಾವು ಕೆಲವು ಪೈಗಂಬರರನ್ನು ಇನ್ನು ಕೆಲವರ ಮೇಲೆ ಶ್ರೇಷ್ಟತೆಯನ್ನು ನೀಡಿದ್ದೇವೆ. ಮತ್ತು ನಾವು ದಾವೂದರವರಿಗೆ ಝಬೂರನ್ನು ದಯಪಾಲಿಸಿರುತ್ತೇವೆ.
ಹೇಳಿರಿ: ನೀವು ಅಲ್ಲಾಹನ ಹೊರತು ಯಾರನ್ನು ಆರಾಧ್ಯರೆಂದು ಭಾವಿಸುತ್ತಿರುವಿರೋ ಅವರನ್ನು ಕರೆದುಬೇಡಿಕೊಳ್ಳಿರಿ. ಆದರೆ ಅವರು ನಿಮ್ಮಿಂದ ಯಾವುದೇ ಸಂಕಷ್ಟವನ್ನು ನೀಗಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ.
ಇವರು ಯಾರನ್ನು ಕರೆದು ಬೇಡುತ್ತಿದ್ದಾರೋ ಸ್ವತಃ ಅವರೇ ತಮ್ಮ ಪ್ರಭುವಿನ ಸಾಮಿಪ್ಯ ಪಡೆಯುವ ಸಾಧನವನ್ನು ಅರಸುತ್ತಾರೆ ತಮ್ಮಲ್ಲಿ ಯಾರು ಅತ್ಯಂತ ನಿಕಟನಾಗುವನೆಂದು. ಸ್ವತಃ ಅವರೇ ಅವನ ಕಾರುಣ್ಯವನ್ನು ಆಶಿಸುತ್ತಿದ್ದಾರೆ ಹಾಗೂ ಅವರು ಯಾತನೆಯನ್ನು ಭಯಪಡುತ್ತಿದ್ದಾರೆ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಯಾತನೆಯು ಭಯಪಡಬೇಕಾದುದ್ದೆ ಆಗಿದೆ.
ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ನಾಡಿರುವುದಿಲ್ಲ. ಇದು ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ.