[1] ಜೀವನದಲ್ಲಿ ಒಮ್ಮೆಯೂ ಸತ್ಯವನ್ನು ತಿಳಿಯುವ ಅವಕಾಶ ಸಿಗದವರನ್ನು ಅಲ್ಲಾಹು ಶಿಕ್ಷಿಸುವುದಿಲ್ಲವೆಂದು ಇದರಿಂದ ಅರ್ಥಮಾಡಿಕೊಳ್ಳಬಹುದು.
[1] ಅವರು ತಮ್ಮ ಕೃಷಿ ಮತ್ತು ಜಾನುವಾರುಗಳಲ್ಲಿ ಒಂದಂಶವನ್ನು ಅಲ್ಲಾಹನಿಗೆ ಮೀಸಲಿಡುತ್ತಿದ್ದರು. ಅಂದರೆ ಅದನ್ನು ಅತಿಥಿಗಳಿಗೆ, ಬಡವರಿಗೆ, ಪ್ರಯಾಣಿಕರಿಗೆ ಖರ್ಚು ಮಾಡುತ್ತಿದ್ದರು. ಇನ್ನೊಂದು ಅಂಶವನ್ನು ಅವರು ತಮ್ಮ ವಿಗ್ರಹಗಳಿಗೆ ಮೀಸಲಿಡುತ್ತಿದ್ದರು. ಇದನ್ನು ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಕೆಲವೊಮ್ಮೆ ಅವರು ಅಲ್ಲಾಹನಿಗೆ ಮೀಸಲಿಟ್ಟದ್ದನ್ನು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಆದರೆ ವಿಗ್ರಹಗಳಿಗೆ ಮೀಸಲಿಟ್ಟದ್ದನ್ನು ಅಲ್ಲಾಹನಿಗೆ, ಅಂದರೆ ಅತಿಥಿಗಳಿಗೆ, ಬಡವರಿಗೆ ನೀಡುತ್ತಿರಲಿಲ್ಲ.
[1] ಅರೇಬಿಯಾದಲ್ಲಿ ಶಿಶುಹತ್ಯೆ ಸಾಮಾನ್ಯವಾಗಿತ್ತು. ಅವರು ಮಕ್ಕಳನ್ನು ವಿಗ್ರಹಗಳಿಗೆ ಬಲಿ ನೀಡುತ್ತಿದ್ದರು. ಬಡತನದ ಭಯದಿಂದ ಮಕ್ಕಳನ್ನು ಕೊಲ್ಲುತ್ತಿದ್ದರು. ಹೆಣ್ಣು ಮಗು ಹುಟ್ಟಿದರೆ ಅಪಮಾನದಿಂದ ಅದನ್ನು ಜೀವಂತ ದಫನ ಮಾಡುತ್ತಿದ್ದರು. ಇವುಗಳನ್ನು ಅವರು ತಪ್ಪೆಂದು ಭಾವಿಸುತ್ತಿರಲಿಲ್ಲ.