(ರಾಣಿಯ) ದೂತರು ಪೈಗಂಬರ್ ಸುಲೈಮಾನರ ಬಳಿ ತಲುಪಿದಾಗ ಅವರು ಹೇಳಿದರು: ನೀವು ಧನದ ಮೂಲಕ ನನಗೆ ನೆರವು ನೀಡಬಯಸುವಿರಾ? ನನಗೆ ಅಲ್ಲಾಹನು ನಿಮಗೆ ನೀಡಿರುವುದಕ್ಕತಿಂತಲೂ ಅತ್ಯುತ್ತಮವಾದುದನ್ನು ನೀಡಿರುತ್ತಾನೆ. ನೀವೇ ನಿಮ್ಮ ಉಡುಗೊರೆಯ ಕುರಿತು ಸಂತುಷ್ಟರಾಗಿರಿ.
ನೀನು ಅವರ ಬಳಿಗೆ ಮರಳು, ನಾವು ಖಂಡಿತ ಅವರು ಎದುರಿಸಲಾಗದಂತಹ ಸೈನ್ಯವನ್ನು ತರುವೆವು. ಹಾಗೂ ನಿಶ್ಚಯವಾಗಿಯೂ ನಾವು ಅವರನ್ನು ನಿಂದ್ಯರು ಮತ್ತು ಅಪಮಾನಿತರನ್ನಾಗಿಸಿ ಅಲ್ಲಿಂದ ಹೊರಗಟ್ಟುವೆವು.
ಯಕ್ಷಗಳ ಪೈಕಿ ಒಬ್ಬ ಬಲಾಢ್ಯನಾದ ಜಿನ್ನ್ ಹೇಳಿದನು: ನೀವು ತಮ್ಮ ಈ ಸಭೆಯಿಂದ ಎದ್ದೇಳುವುದಕ್ಕೂ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತರುತ್ತೇನೆ. ನಿಜವಾಗಿಯೂ ನಾನು ಇದಕ್ಕೆ ಶಕ್ತನೂ ಮತ್ತು ನಂಬಿಗಸ್ಥನೂ ಆಗಿದ್ದೇನೆ.
ಗ್ರಂಥದ ಜ್ಞಾನ ಪಡೆದ ಓರ್ವನು ಹೇಳಿದನು: ನಾನದನ್ನು ನಿಮ್ಮ ಬಳಿಗೆ ನೀವು ತಮ್ಮ ಕಣ್ಣರೆಪ್ಪೆಗಳನ್ನು ಮಿಟುಕಿಸುವುದಕ್ಕೂ ಮುನ್ನ ತಂದು ಕೊಡಬಲ್ಲೆನು. ಅವರು ಅದನ್ನು ತನ್ನ ಬಳಿಯಿರುವುದಾಗಿ ಕಂಡಾಗ ಹೇಳಿದರು: ಇದು ನನ್ನ ಪ್ರಭುವಿನ ಅನುಗ್ರಹವಾಗಿದೆ. ನಾನು ಕೃತಜ್ಞತೆ ಸಲ್ಲಿಸುವೆನೋ ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲೆಂದಾಗಿದೆ ಮತ್ತು ಯಾರು ಕೃತಜ್ಞತೆ ಸಲ್ಲಿಸುತ್ತಾನೋ ಅವನು ತನ್ನದೇ ಪ್ರಯೋಜನಕ್ಕೋಸ್ಕರ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರುತ್ತಾನೋ ನನ್ನ ಪ್ರಭುವು ನಿರಪೇಕ್ಷನೂ ಉದಾರಿಯೂ ಆಗಿದ್ದಾನೆ.
ಅನಂತರ ಆಕೆ ಬಂದಾಗ ನಿನ್ನ ಸಿಂಹಾಸನ ಹೀಗೆ ಇದೆಯೇ? ಎಂದು ಕೇಳಲಾಯಿತು. ಅವಳು ಹೇಳಿದಳು: ಇದು ಅದುವೇ ಎಂಬAತಿದೆ. ನಮಗೆ ಇದಕ್ಕೂ ಮೊದಲೇ ಜ್ಞಾನವನ್ನು ನೀಡಲಾಗಿದೆ ಮತ್ತು ನಾವು ವಿಧೇಯರಾಗಿದ್ದೇವು.
ಅವಳಿಗೆ ಹೇಳಲಾಯಿತು: ನೀನು ಅರಮನೆಯನ್ನು ಪ್ರವೇಶಿಸು. ಅವಳು ಅದನ್ನು ಕಂಡಾಗ ಸರೋವರವೆಂದೇ ಭಾವಿಸಿಕೊಂಡು ತನ್ನ ಕುಣ ಕಾಲುಗಳವರೆಗೆ ಬಟ್ಟೆಗಳನ್ನು ಮೇಲೇರಿಸಿದಳು. ಅವರು ಹೇಳಿದರು: ಇದಂತು ಗಾಜಿನಿಂದ ನುಣುಪಾಗಿ ಹಾಸಲ್ಪಟ್ಟ ಅರಮನೆಯಾಗಿದೆ. ಅವಳು ಹೇಳಿದಳು: ನನ್ನ ಪ್ರಭುವೇ ನಿಜವಾಗಿಯೂ, ನಾನು ನನ್ನ ಮೇಲೆ ಅಕ್ರಮ ಮಾಡಿರುವೆನು. ಇನ್ನು ನಾನು ಸುಲೈಮಾನನ ಜೊತೆ ಸರ್ವಲೋಕಗಳ ಪ್ರಭುವಿಗೆ ವಿಧೇಯಳಾಗಿದ್ದೇನೆ.