ಗ್ರಂಥದ ಜ್ಞಾನ ಪಡೆದ ಓರ್ವನು ಹೇಳಿದನು: ನಾನದನ್ನು ನಿಮ್ಮ ಬಳಿಗೆ ನೀವು ತಮ್ಮ ಕಣ್ಣರೆಪ್ಪೆಗಳನ್ನು ಮಿಟುಕಿಸುವುದಕ್ಕೂ ಮುನ್ನ ತಂದು ಕೊಡಬಲ್ಲೆನು. ಅವರು ಅದನ್ನು ತನ್ನ ಬಳಿಯಿರುವುದಾಗಿ ಕಂಡಾಗ ಹೇಳಿದರು: ಇದು ನನ್ನ ಪ್ರಭುವಿನ ಅನುಗ್ರಹವಾಗಿದೆ. ನಾನು ಕೃತಜ್ಞತೆ ಸಲ್ಲಿಸುವೆನೋ ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲೆಂದಾಗಿದೆ ಮತ್ತು ಯಾರು ಕೃತಜ್ಞತೆ ಸಲ್ಲಿಸುತ್ತಾನೋ ಅವನು ತನ್ನದೇ ಪ್ರಯೋಜನಕ್ಕೋಸ್ಕರ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರುತ್ತಾನೋ ನನ್ನ ಪ್ರಭುವು ನಿರಪೇಕ್ಷನೂ ಉದಾರಿಯೂ ಆಗಿದ್ದಾನೆ.