قرآن کریم کے معانی کا ترجمہ - کنڑ ترجمہ - بشیر ميسوری

صفحہ نمبر:close

external-link copy
6 : 11

وَمَا مِنْ دَآبَّةٍ فِی الْاَرْضِ اِلَّا عَلَی اللّٰهِ رِزْقُهَا وَیَعْلَمُ مُسْتَقَرَّهَا وَمُسْتَوْدَعَهَا ؕ— كُلٌّ فِیْ كِتٰبٍ مُّبِیْنٍ ۟

ಭೂಮಿಯಲ್ಲಿ ಚಲಿಸುತ್ತಿರುವ ಪ್ರತಿಯೊಂದು ಜೀವಿಯ ಜೀವನಾಧಾರವು ಅಲ್ಲಾಹನ ಹೊಣೆಯಲ್ಲಿದೆ ಮತ್ತು ಅವನು ಅವುಗಳ ಇಹದ ತಾತ್ಕಾಲಿಕ ಮತ್ತು ಪರದ ತಂಗುದಾಣವನ್ನು ಅರಿಯುತ್ತಾನೆ. ಸಕಲವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಟ್ಟಿವೆ. info
التفاسير:

external-link copy
7 : 11

وَهُوَ الَّذِیْ خَلَقَ السَّمٰوٰتِ وَالْاَرْضَ فِیْ سِتَّةِ اَیَّامٍ وَّكَانَ عَرْشُهٗ عَلَی الْمَآءِ لِیَبْلُوَكُمْ اَیُّكُمْ اَحْسَنُ عَمَلًا ؕ— وَلَىِٕنْ قُلْتَ اِنَّكُمْ مَّبْعُوْثُوْنَ مِنْ بَعْدِ الْمَوْتِ لَیَقُوْلَنَّ الَّذِیْنَ كَفَرُوْۤا اِنْ هٰذَاۤ اِلَّا سِحْرٌ مُّبِیْنٌ ۟

ಅವನೇ ಆಕಾಶಗಳನ್ನು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ಅವನ ಸಿಂಹಾಸನವು ಜಲದ ಮೇಲಿತ್ತು, ಇದು ನಿಮ್ಮ ಪೈಕಿ ಅತ್ಯುತ್ತಮ ಕರ್ಮಗಳನ್ನು ಎಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿದೆ, ನೀವು ಮರಣಾನಂತರ ಎಬ್ಬಿಸಲ್ಪಡುವಿರೆಂದು ಅವರೊಡನೆ ಹೇಳಿದರೆ ಖಂಡಿತವಾಗಿಯೂ ಇದು ಸ್ಪಷ್ಟ ಜಾದುವೇ ಆಗಿದೆ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ. info
التفاسير:

external-link copy
8 : 11

وَلَىِٕنْ اَخَّرْنَا عَنْهُمُ الْعَذَابَ اِلٰۤی اُمَّةٍ مَّعْدُوْدَةٍ لَّیَقُوْلُنَّ مَا یَحْبِسُهٗ ؕ— اَلَا یَوْمَ یَاْتِیْهِمْ لَیْسَ مَصْرُوْفًا عَنْهُمْ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟۠

ಒಂದು ನಿಶ್ಚಿತ ಅವಧಿಯವರೆಗೆ ಅವರಿಂದ ಯಾತನೆಯನ್ನು ನಾವು ತಡೆದು ಇರಿಸಿದಾಗ ಪರಿಹಾಸ್ಯವಾಗಿ ಯಾವ ವಸ್ತುವೂ ಅದನ್ನು ತಡೆ ಹಿಡಿಯಿತು ? ಎಂದು ಸತ್ಯನಿಷೇಧಿಗಳು ಕೇಳುತ್ತಾರೆ. ಜಾಗ್ರತೆ! ಅದು ಬಂದೆರಗುವ ದಿನದಂದು, ಯಾರಿಂದಲೂ ಅದನ್ನು ಸರಿಸಲಾಗದು, ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಕೊಳ್ಳುವುದು. info
التفاسير:

external-link copy
9 : 11

وَلَىِٕنْ اَذَقْنَا الْاِنْسَانَ مِنَّا رَحْمَةً ثُمَّ نَزَعْنٰهَا مِنْهُ ۚ— اِنَّهٗ لَیَـُٔوْسٌ كَفُوْرٌ ۟

ನಾವು ಮನುಷ್ಯನಿಗೆ ನಮ್ಮಿಂದ ಯಾವುದಾದರೂ ಕೃಪೆಯ ಸವಿಯನ್ನುಣಿಸಿ ಅನಂತರ ಅದನ್ನು ಅವನಿಂದ ಕಸಿದುಕೊಂಡರೆ ಖಂಡಿತವಾಗಿಯೂ ಅವನು ನಿರಾಶನು ಕೃತಘ್ನನೂ ಆಗಿಬಿಡುತ್ತಾನೆ. info
التفاسير:

external-link copy
10 : 11

وَلَىِٕنْ اَذَقْنٰهُ نَعْمَآءَ بَعْدَ ضَرَّآءَ مَسَّتْهُ لَیَقُوْلَنَّ ذَهَبَ السَّیِّاٰتُ عَنِّیْ ؕ— اِنَّهٗ لَفَرِحٌ فَخُوْرٌ ۟ۙ

ಮತ್ತು ಅವನಿಗೆ ಬಾಧಿಸಿದ ಸಂಕಷ್ಟದ ನಂತರ ನಾವು ಅವನಿಗೆ ಯಾವುದಾದರೂ ಸುಖಾನುಗ್ರಹದ ಸವಿಯನ್ನುಣಿಸಿದರೆ ನನ್ನಿಂದ ಕೆಡುಕುಗಳು ತೊಲಗಿದವು ಎಂದು ಅವನು ಹೇಳತೊಡಗುತ್ತಾನೆ. ನಿಜವಾಗಿಯೂ ಅವನು ಹರ್ಷಿತನೂ, ಅಹಂಕಾರಿಯೂ ಆಗಿಬಿಡುತ್ತಾನೆ. info
التفاسير:

external-link copy
11 : 11

اِلَّا الَّذِیْنَ صَبَرُوْا وَعَمِلُوا الصّٰلِحٰتِ ؕ— اُولٰٓىِٕكَ لَهُمْ مَّغْفِرَةٌ وَّاَجْرٌ كَبِیْرٌ ۟

ಆದರೆ ಸಹನೆ ವಹಿಸಿ ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರಿಗೆ ಕ್ಷಮೆ ಮತ್ತು ಅತ್ಯುತ್ತಮ ಪ್ರತಿಫಲವಿದೆ. info
التفاسير:

external-link copy
12 : 11

فَلَعَلَّكَ تَارِكٌ بَعْضَ مَا یُوْحٰۤی اِلَیْكَ وَضَآىِٕقٌ بِهٖ صَدْرُكَ اَنْ یَّقُوْلُوْا لَوْلَاۤ اُنْزِلَ عَلَیْهِ كَنْزٌ اَوْ جَآءَ مَعَهٗ مَلَكٌ ؕ— اِنَّمَاۤ اَنْتَ نَذِیْرٌ ؕ— وَاللّٰهُ عَلٰی كُلِّ شَیْءٍ وَّكِیْلٌ ۟ؕ

ಈ ವ್ಯಕ್ತಿಯ (ಪೈಗಂಬರ್) ಮೇಲೆ ನಿಧಿಯೊಂದು ಏಕೆ ಇಳಿಸಲಾಗಿಲ್ಲ ? ಅಥವ ಅವನ ಜೊತೆ ದೇವಚರನೋರ್ವನು ಏಕೆ ಬರಲಿಲ್ಲ? ಎಂದು ನಿಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮ್ಮೆಡೆಗೆ ಅವತೀರ್ಣವಾಗುತ್ತಿರುವುದರಲ್ಲಿ ಕೆಲವೊಂದು ಭಾಗವನ್ನು ನೀವು ತೊರೆದು ಬಿಡಬಹುದು. ಮತ್ತು ನಿಮ್ಮ ಮನಸ್ಸು ಸಂಕುಚಿತಗೊಳ್ಳಬಹುದು. ನೀವಂತೂ ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ ಮತ್ತು ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುವನು. info
التفاسير: