Kur'an-ı Kerim meal tercümesi - Kanadaca Tercüme - Hamza Batur

Sayfa numarası:close

external-link copy
37 : 9

اِنَّمَا النَّسِیْٓءُ زِیَادَةٌ فِی الْكُفْرِ یُضَلُّ بِهِ الَّذِیْنَ كَفَرُوْا یُحِلُّوْنَهٗ عَامًا وَّیُحَرِّمُوْنَهٗ عَامًا لِّیُوَاطِـُٔوْا عِدَّةَ مَا حَرَّمَ اللّٰهُ فَیُحِلُّوْا مَا حَرَّمَ اللّٰهُ ؕ— زُیِّنَ لَهُمْ سُوْٓءُ اَعْمَالِهِمْ ؕ— وَاللّٰهُ لَا یَهْدِی الْقَوْمَ الْكٰفِرِیْنَ ۟۠

ನಿಶ್ಚಯವಾಗಿಯೂ ನಸೀ (ಪವಿತ್ರ ತಿಂಗಳುಗಳನ್ನು ಹಿಂದೆ-ಮುಂದೆ ಮಾಡುವುದು) ಸತ್ಯನಿಷೇಧದಲ್ಲಿರುವ ಹೆಚ್ಚಳವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಇನ್ನೂ ಹೆಚ್ಚು ದಾರಿತಪ್ಪಿಸಲಾಗುತ್ತಿದೆ. ಒಂದು ವರ್ಷ ಅವರು ಅದನ್ನು (ಪವಿತ್ರ ತಿಂಗಳನ್ನು) ಪವಿತ್ರವಲ್ಲ ಎನ್ನುತ್ತಾರೆ ಮತ್ತು ಇನ್ನೊಂದು ವರ್ಷ ಪವಿತ್ರ ಎನ್ನುತ್ತಾರೆ. ಹೀಗೆ ಅವರು ಅಲ್ಲಾಹು ಪವಿತ್ರಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಸರಿಹೊಂದಿಸಿ ಅಲ್ಲಾಹು ನಿಷೇಧಿಸಿದ್ದನ್ನು ಅನುಮತಿಸುತ್ತಾರೆ.[1] ಅವರ ದುಷ್ಕರ್ಮಗಳನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info

[1] ಇಸ್ಲಾಮೀ ಪೂರ್ವಕಾಲದಲ್ಲಿ ಅರಬ್ಬರು ವರ್ಷದಲ್ಲಿ ನಾಲ್ಕು ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿದ್ದರು. ಆ ತಿಂಗಳುಗಳಲ್ಲಿ ಅವರು ಯುದ್ಧ ಮಾಡುತ್ತಿರಲಿಲ್ಲ. ಆದರೆ ಪ್ರತಿ ವರ್ಷವೂ ಅವರು ಅದೇ ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ. ಬದಲಿಗೆ, ತಮಗೆ ಹೊಂದಿಕೆಯಾಗುವಂತೆ ಅವುಗಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಒಂದು ವರ್ಷ ಅವರು ಮುಹರ್‍ರಂ ತಿಂಗಳನ್ನು ಪವಿತ್ರವೆಂದು ಪರಿಗಣಿಸಿದರೆ ಇನ್ನೊಂದು ವರ್ಷ ಅದು ಅವರಿಗೆ ಹೊಂದಿಕೆಯಾಗದಿದ್ದರೆ ಅದನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ.

التفاسير:

external-link copy
38 : 9

یٰۤاَیُّهَا الَّذِیْنَ اٰمَنُوْا مَا لَكُمْ اِذَا قِیْلَ لَكُمُ انْفِرُوْا فِیْ سَبِیْلِ اللّٰهِ اثَّاقَلْتُمْ اِلَی الْاَرْضِ ؕ— اَرَضِیْتُمْ بِالْحَیٰوةِ الدُّنْیَا مِنَ الْاٰخِرَةِ ۚ— فَمَا مَتَاعُ الْحَیٰوةِ الدُّنْیَا فِی الْاٰخِرَةِ اِلَّا قَلِیْلٌ ۟

ಓ ಸತ್ಯವಿಶ್ವಾಸಿಗಳೇ! ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೊರಡಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ನೀವು ಪರಲೋಕದ ಬದಲು ಇಹಲೋಕವನ್ನೇ ನೆಚ್ಚಿಕೊಂಡಿದ್ದೀರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಆನಂದಗಳು ಕ್ಷಣಿಕವಾಗಿವೆ. info
التفاسير:

external-link copy
39 : 9

اِلَّا تَنْفِرُوْا یُعَذِّبْكُمْ عَذَابًا اَلِیْمًا ۙ۬— وَّیَسْتَبْدِلْ قَوْمًا غَیْرَكُمْ وَلَا تَضُرُّوْهُ شَیْـًٔا ؕ— وَاللّٰهُ عَلٰی كُلِّ شَیْءٍ قَدِیْرٌ ۟

ನೀವು ಯುದ್ಧಕ್ಕೆ ಹೊರಡದಿದ್ದರೆ ಅಲ್ಲಾಹು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ನೀವಲ್ಲದ ಬೇರೆ ಜನತೆಯನ್ನು ತರುವನು. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
40 : 9

اِلَّا تَنْصُرُوْهُ فَقَدْ نَصَرَهُ اللّٰهُ اِذْ اَخْرَجَهُ الَّذِیْنَ كَفَرُوْا ثَانِیَ اثْنَیْنِ اِذْ هُمَا فِی الْغَارِ اِذْ یَقُوْلُ لِصَاحِبِهٖ لَا تَحْزَنْ اِنَّ اللّٰهَ مَعَنَا ۚ— فَاَنْزَلَ اللّٰهُ سَكِیْنَتَهٗ عَلَیْهِ وَاَیَّدَهٗ بِجُنُوْدٍ لَّمْ تَرَوْهَا وَجَعَلَ كَلِمَةَ الَّذِیْنَ كَفَرُوا السُّفْلٰی ؕ— وَكَلِمَةُ اللّٰهِ هِیَ الْعُلْیَا ؕ— وَاللّٰهُ عَزِیْزٌ حَكِیْمٌ ۟

ನೀವು ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಿಲ್ಲವೆಂದಾದರೆ, ಅಲ್ಲಾಹು ಅವರಿಗೆ ಖಂಡಿತ ಸಹಾಯ ಮಾಡಿದ್ದಾನೆ. ಅವರು ಇಬ್ಬರಲ್ಲಿ ಒಬ್ಬರಾಗಿದ್ದು, ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಹೊರದಬ್ಬಿ, ಅವರಿಬ್ಬರು[1] ಗುಹೆಯಲ್ಲಿ ಆಶ್ರಯ ಪಡೆದಾಗ ಮತ್ತು ಅವರು ತಮ್ಮ ಸಹಚರನೊಡನೆ, “ಸಂಕಟಪಡಬೇಡ, ನಿಶ್ಚಯವಾಗಿಯೂ ಅಲ್ಲಾಹು ನಮ್ಮ ಜೊತೆಗಿದ್ದಾನೆ” ಎಂದು ಹೇಳಿದ ಸಂದರ್ಭ. ಆಗ ಅಲ್ಲಾಹು ಅವರ ಮೇಲೆ ತನ್ನ ಕಡೆಯ ಶಾಂತಿಯನ್ನು ಇಳಿಸಿದನು, ನೀವು ನೋಡದೇ ಇರುವಂತಹ ಸೈನ್ಯಗಳ ಮೂಲಕ ಅವರಿಗೆ ಶಕ್ತಿಯನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವು ಅತ್ಯುನ್ನತವಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info

[1] ಅಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಆಪ್ತ ಸಂಗಡಿಗರಾದ ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ). ಈ ಘಟನೆ ನಡೆದದ್ದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ) ಮಕ್ಕಾದಿಂದ ಪಲಾಯನ ಮಾಡಿ ಹತ್ತಿರದ ಸೌರ್ ಗುಹೆಯಲ್ಲಿ ಆಶ್ರಯಪಡೆದಾಗ.

التفاسير: