[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನಾದರೂ ಆದೇಶಿಸಿದರೆ ಸತ್ಯವಿಶ್ವಾಸಿಗಳು ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ ಎನ್ನುತ್ತಿದ್ದರು. ಆದರೆ ಯಹೂದಿಗಳು ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ ಎನ್ನುತ್ತಾ ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಿದ್ದರು. ಅದೇ ರೀತಿ ಅವರು ದ್ವಂದ್ವಾರ್ಥವಿರುವ ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ ಎಂಬ ಮಾತನ್ನೂ ಹೇಳುತ್ತಿದ್ದರು. ಇದಕ್ಕೆ ಹೊರತಾಗಿ ಅವರು ನಮ್ಮ ಕಡೆಗೆ ಗಮನಕೊಡು (ರಾಇನಾ) ಎಂಬ ದ್ವಂದ್ವಾರ್ಥವಿರುವ ಇನ್ನೊಂದು ವಚನವನ್ನು ಬಳಸುತ್ತಿದ್ದರು. ಇವುಗಳನ್ನು ಹೇಳುವಾಗ ಅವರು ತಮ್ಮ ನಾಲಗೆಗಳನ್ನು ತಿರುಚಿ ಎರಡು ರೀತಿಯ ಅರ್ಥ ಬರುವಂತೆ ಮಾಡುತ್ತಿದ್ದರು.