ನಂತರ ನಾವು ಸತತವಾಗಿ ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವು. ಯಾವುದೇ ಸಮುದಾಯಕ್ಕೆ ಅವರ ಸಂದೇಶವಾಹಕರು ಬಂದಾಗಲೆಲ್ಲ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ನಾವು ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಹಿಂಬಾಲಿಸುವಂತೆ ಮಾಡಿ, ಅವರನ್ನು ದಂತಕಥೆಗಳನ್ನಾಗಿ ಮಾಡಿದೆವು. ವಿಶ್ವಾಸವಿಡದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!
ನಾವು ಮರ್ಯಮರ ಪುತ್ರ ಈಸಾರನ್ನು ಮತ್ತು ಅವರ ತಾಯಿಯನ್ನು ಒಂದು ದೃಷ್ಟಾಂತವಾಗಿ ಮಾಡಿದೆವು. ವಾಸಯೋಗ್ಯವಾದ ಮತ್ತು ನೀರಿನ ಚಿಲುಮೆಯಿರುವ ಒಂದು ಎತ್ತರದ ಸ್ಥಳದಲ್ಲಿ ನಾವು ಅವರಿಬ್ಬರಿಗೆ ಆಶ್ರಯ ನೀಡಿದೆವು.
ಸಂದೇಶವಾಹಕರುಗಳೇ![[ ImageMedia, 22-01-2024 18:07]] ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ಸತ್ಕರ್ಮ ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ನಾನು ತಿಳಿಯುತ್ತಿದ್ದೇನೆ.