ಅದರಲ್ಲಿ ಸ್ಪಷ್ಟ ದೃಷ್ಟಾಂತಗಳಿವೆ. ಇಬ್ರಾಹೀಮ್(ಅ)ರವರು ನಿಂತಿದ್ದ ಸ್ಥಳವಿದೆ. ಯಾರು ಅಲ್ಲಿಗೆ ಪ್ರವೇಶಿಸುತ್ತಾನೋ ಅವನು ನಿರ್ಭಯನಾಗುವನು. ಅಲ್ಲಾಹನು ಅದರೆಡೆಗೆ ತಲುಪಲು ಸಾಧ್ಯವಿರುವ ಜನರ ಮೇಲೆ ಆ ಭವನದ ಹಜ್ಜ್ಯಾತ್ರೆ ನಡೆಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಇನ್ನು ಯಾರಾದರೂ (ಈ ಆದೇಶವನ್ನು) ನಿರಾಕರಿಸಿದರೆ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷನಾಗಿದ್ದಾನೆ.