ತರುವಾಯ ಅವರು ಕೋಣೆಯಲ್ಲಿ ನಮಾಝ್ ಮಾಡುತ್ತಾ ನಿಂತಿದ್ದಾಗ ಮಲಕ್ (ದೂತರು) ಅವರಿಗೆ ಕರೆದು ಹೇಳಿದರು: ನಿಸ್ಸಂಶಯವಾಗಿಯು ಅಲ್ಲಾಹನು ನಿಮಗೆ 'ಯಾಹ್ಯಾರ (ಪುತ್ರನ) ಕುರಿತು ಶುಭವಾರ್ತೆಯನ್ನು ನೀಡುತ್ತಾನೆ. ಅವರು (ಯಾಹ್ಯಾ) ಅಲ್ಲಾಹನ ವಚನವನ್ನು (ಈಸಾರವರನ್ನು) ಸತ್ಯವೆಂದು ಸಮರ್ಥಿಸುವವರೂ, ನಾಯಕರೂ, ಆತ್ಮಸಂಯಮಿಯೂ, ಸಜ್ಜನರಲ್ಲಿ ಸೇರಿದ ಪೈಗಂಬರರಾಗಿರುವರು'.