ಅನಂತರ ಅವರು ನಿಮ್ಮೊಂದಿಗೆ ತರ್ಕಿಸುವುದಾದರೆ 'ನಾನು ಮತ್ತು ನನ್ನ ಅನುಯಾಯಿಗಳು ಅಲ್ಲಾಹನಿಗೆ ಶರಣಾಗಿದ್ದೇವೆ' ಎಂದು ಹೇಳಿರಿ. ಗ್ರಂಥ ನೀಡಲಾದವರೊಂದಿಗೆ ಮತ್ತು ನಿರಕ್ಷರಿಗಳೊಂದಿಗೆ (ಬಹುದೇವಾರಾಧಕರು) 'ನೀವೂ ವಿಧೇಯರಾಗಿದ್ದೀರಾ'? ಎಂದು ಕೇಳಿರಿ ಅವರು ವಿಧೇಯರಾದರೆ ಖಂಡಿತ ಅವರು ಸನ್ಮಾರ್ಗವನ್ನು ಪಡೆದರು. ಇನ್ನು ಅವರು ವಿಮುಖರಾಗಿಬಿಟ್ಟರೆ ನಿಮ್ಮ ಮೇಲೆ ಸಂದೇಶ ತಲುಪಿಸುವ ಹೊಣೆಗಾರಿಕೆ ಮಾತ್ರವಿದೆ ಮತ್ತು ಅಲ್ಲಾಹನು ದಾಸರನ್ನು ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.