ಶುದ್ಧರನ್ನು ಅಶುದ್ಧರಿಂದ ಬೇರ್ಪಡಿಸುವ ತನಕ ನೀವು ಈಗಿರುವ ಸ್ಥಿತಿಯಲ್ಲೇ ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಬಿಟ್ಟು ಬಿಡುವುದಿಲ್ಲ ಮತ್ತು ಅಲ್ಲಾಹನು ನಿಮಗೆ ಅಗೋಚರ ಜ್ಞಾನವನ್ನು ಪ್ರಕಟಗೊಳಿಸುವುದಿಲ್ಲ. ಆದರೆ ಅಲ್ಲಾಹನು ತನ್ನ ಸಂದೇಶವಾಹಕರ ಪೈಕಿ ತಾನಿಚ್ಛಿಸುವವರನ್ನು (ಅಗೋಚರ ಜ್ಞಾನ ನೀಡುವುದಕ್ಕಾಗಿ) ಆಯ್ಕೆ ಮಾಡುತ್ತಾನೆ. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡಿರಿ. ನೀವು ವಿಶ್ವಾಸವಿಡುವವರು ಮತ್ತು ಭಯಭಕ್ತಿ ಪಾಲಿಸುವವರಾದರೆ ನಿಮಗೆ ಮಹಾ ಪ್ರತಿಫಲವಿದೆ.