[1] ಯಹೂದಿಗಳು ಅವರ ಧರ್ಮಗ್ರಂಥವನ್ನು ತಿದ್ದುಪಡಿ ಮಾಡಿದ್ದು ಮಾತ್ರವಲ್ಲದೆ, ಜನಸಾಮಾನ್ಯರ ಮುಂದೆ ಅದನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚಿ ಜನರು ಬೇರೆ ಅರ್ಥವನ್ನು ಭಾವಿಸುವಂತೆ ಮಾಡುತ್ತಿದ್ದರು. ಅದೇ ರೀತಿ ಅವರು ತಮ್ಮ ಕೆಲವು ಮಾತುಗಳನ್ನು ಅಲ್ಲಾಹನ ವಚನಗಳೆಂದು ಸುಳ್ಳು ಹೇಳುತ್ತಿದ್ದರು.
[1] ಅಲ್ಲಾಹು ಪ್ರತಿಯೊಬ್ಬ ಪ್ರವಾದಿಯಿಂದಲೂ ಈ ಕರಾರನ್ನು ಪಡೆದಿದ್ದನು. ಈ ಕರಾರಿನ ಪ್ರಕಾರ ಒಬ್ಬ ಪ್ರವಾದಿ ಅಸ್ತಿತ್ವದಲ್ಲಿರುವಾಗ, ಅಥವಾ ಅವರ ಬೋಧನೆಯು ಅಸ್ತಿತ್ವದಲ್ಲಿರುವಾಗ, ಹೊಸ ಪ್ರವಾದಿಯ ಆಗಮನವಾದರೆ ಆ ಪ್ರವಾದಿ ತನ್ನ ಬೋಧನೆಯನ್ನು ನಿಲ್ಲಿಸಿ ಆ ಹೊಸ ಪ್ರವಾದಿಯನ್ನು ಅನುಸರಿಸಬೇಕು. ಒಬ್ಬ ಪ್ರವಾದಿಗೆ ತನ್ನ ನಂತರ ಬರುವ ಹೊಸ ಪ್ರವಾದಿಯನ್ನು ಅನುಸರಿಸುವುದು ಕಡ್ಡಾಯವಾದರೆ ಅವರ ಅನುಯಾಯಿಗಳಿಗೂ ಅದು ಕಡ್ಡಾಯವಾಗಿದೆಯೆಂದು ಬೇರೆಯೇ ಹೇಳಬೇಕಾಗಿಲ್ಲ. ಆದ್ದರಿಂದ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಆಗಮನದ ನಂತರ ಹಿಂದಿನ ಪ್ರವಾದಿಗಳ ಬೋಧನೆಗಳೆಲ್ಲವೂ ಅನೂರ್ಜಿತವಾಗುತ್ತವೆ ಮತ್ತು ಆ ಎಲ್ಲಾ ಪ್ರವಾದಿಗಳು ಮತ್ತು ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಬೋಧನೆಗಳನ್ನು ಅನುಸರಿಸಬೇಕಾಗುತ್ತದೆ.