[1] ಈತ ಇಸ್ಲಾಂ ಧರ್ಮದ ಕಡುವೈರಿಯಾಗಿದ್ದ ಆಸ್ ಬಿನ್ ವಾಯಿಲ್. ಕಮ್ಮಾರ ಕೆಲಸ ಮಾಡುತ್ತಿದ್ದ ಖಬ್ಬಾಬ್ ಬಿನ್ ಅರತ್ ಇಸ್ಲಾಂ ಸ್ವೀಕರಿಸಿದರು. ಅವರಿಗೆ ಆಸ್ ಬಿನ್ ವಾಯಿಲ್ ನಿಂದ ಹಣ ಬರಬೇಕಿತ್ತು. ಅವರು ಅದನ್ನು ಕೇಳಿದಾಗ ಆಸ್ ಬಿನ್ ವಾಯಿಲ್ ಹೇಳಿದ: “ನೀನು ಮುಹಮ್ಮದರನ್ನು ನಿಷೇಧಿಸಿದರೆ ಮಾತ್ರ ನಿನ್ನ ಹಣವನ್ನು ಕೊಡುತ್ತೇನೆ.” ಖಬ್ಬಾಬ್ ಹೇಳಿದರು: “ನೀನು ಇನ್ನೊಂದು ಜನ್ಮವೆತ್ತಿ ಬಂದರೂ ಅದು ಸಾಧ್ಯವಿಲ್ಲ.” ಆಗ ಆಸ್ ಹೇಳಿದ: “ನಾನು ಸತ್ತ ನಂತರ ಪುನಃ ನನಗೆ ಜೀವ ನೀಡಿ ಎಬ್ಬಿಸಲಾದರೂ ಅಲ್ಲಿ ನನಗೆ ಹೇರಳ ಐಶ್ವರ್ಯ ಮತ್ತು ಮಕ್ಕಳನ್ನು ನೀಡಿ ಆಶೀರ್ವದಿಸಲಾಗುವುದು.” ಅವನ ಅಹಂಕಾರದ ಮಾತುಗಳನ್ನು ಖಂಡಿಸುತ್ತಾ ಈ ವಚನಗಳು ಅವತೀರ್ಣವಾದವು.
[1] ಅಂದರೆ ಸತ್ಯವಿಶ್ವಾಸಿಗಳು ಮತ್ತು ದೇವಭಯವುಳ್ಳವರಿಗೆ ಮಾತ್ರ ಶಿಫಾರಸು ಮಾಡುವ ಅಧಿಕಾರ ದೊರೆಯುವುದು. ಅಲ್ಲಾಹು ಇಚ್ಛಿಸುವವರಿಗೆ ಮಾತ್ರ ಅವರು ಶಿಫಾರಸು ಮಾಡುವರು.