[1] ಅಂದರೆ ಪ್ರವಾದಿಗಳು (ಅವರ ಮೇಲೆ ಶಾಂತಿಯಿರಲಿ) ದೇವವಾಣಿಯ ಆಧಾರದಲ್ಲಿ ಮಾತನಾಡುವಾಗ, ಅಥವಾ ಅಲ್ಲಾಹನ ಗ್ರಂಥದ ವಚನಗಳನ್ನು ಓದಿಕೊಡುವಾಗ, ಶೈತಾನನು ಅವರ ಮಾತಿನಲ್ಲಿ ತನ್ನ ಮಾತನ್ನು ಸೇರಿಸಲು, ಅಥವಾ ಅಲ್ಲಾಹನ ವಚನಕ್ಕೆ ತನ್ನ ವಚನಗಳನ್ನು ಸೇರಿಸಲು, ಅಥವಾ ಅದನ್ನು ಓದಿಕೊಡುವಾಗ ಜನರ ಮನದಲ್ಲಿ ದುರ್ವಿಚಾರಗಳನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದನು. ಆದರೆ ಅಲ್ಲಾಹು ಶೈತಾನನ ಈ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ತನ್ನ ವಚನಗಳನ್ನು ಬಲಿಷ್ಠಗೊಳಿಸುತ್ತಿದ್ದನು.