[1] ಅಂದರೆ ನಿಮ್ಮ ಹೃದಯದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಒಲವು ಇದ್ದರೆ, ಅಥವಾ ಇಸ್ಲಾಂ ಸ್ವೀಕರಿಸುವ ಇರಾದೆಯಿದ್ದರೆ, ಅಲ್ಲಾಹು ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮಾಡುವನು. ನಂತರ ನಿಮ್ಮಿಂದ ಪಡೆದ ಪರಿಹಾರ ಧನಕ್ಕೆ ಬದಲಿಯಾಗಿ ನಿಮಗೆ ಐಶ್ವರ್ಯವನ್ನು ನೀಡುವನು.
[1] ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಎಂದರೆ ಮುಹಾಜಿರ್ಗಳು. ಇವರು ಶ್ರೇಷ್ಠತೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಶ್ರಯ ನೀಡಿ ಸಹಾಯ ಮಾಡಿದವರು ಎಂದರೆ ಅನ್ಸಾರ್ಗಳು. ಇವರು ಶ್ರೇಷ್ಠತೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
[2] ಇವರು ಇಸ್ಲಾಂ ಧರ್ಮ ಸ್ವೀಕರಿಸಿದ ನಂತರ ಮದೀನಕ್ಕೆ ವಲಸೆ (ಹಿಜ್ರ) ಮಾಡದೆ ತಮ್ಮದೇ ಊರಲ್ಲಿ ವಾಸವಾಗಿದ್ದ ಮುಸಲ್ಮಾನರು. ಇವರ ರಕ್ಷಣೆ ಮಾಡುವ ಯಾವುದೇ ಹೊಣೆಗಾರಿಕೆ ಮದೀನದ ಮುಸಲ್ಮಾನರಿಗಿಲ್ಲ. ಆದರೆ ಅವರು ಸತ್ಯನಿಷೇಧಿಗಳ ವಿರುದ್ಧ ಸಹಾಯ ಕೇಳಿದರೆ ಸಹಾಯ ಮಾಡಬೇಕು. ಆದರೆ ಆ ಸತ್ಯನಿಷೇಧಿಗಳು ಮುಸಲ್ಮಾನರೊಡನೆ ಕರಾರಿನಲ್ಲಿರುವವರಾಗಿದ್ದರೆ ಅವರ ವಿರುದ್ಧ ಅವರಿಗೆ ಸಹಾಯ ಮಾಡಬಾರದು.
291. ಮದೀನಕ್ಕೆ ಬಂದ ಮುಹಾಜಿರ್ಗಳಾದ ಮುಸ್ಲಿಮರು.292. ಮದೀನಾ ನಿವಾಸಿಗಳಾದ ಮುಸ್ಲಿಮರು. ಅನ್ಸಾರ್ (ಸಹಾಯಕರು) ಎಂದು ಇವರನ್ನು ಕರೆಯಲಾಗುತ್ತದೆ.