ಒಳಿತು ಮಾಡುವ ಉದ್ದೇಶದಿಂದಲೇ ಹೊರತು ನೀವು ಅನಾಥರ ಆಸ್ತಿಯನ್ನು ಮುಟ್ಟಬೇಡಿ. ಅವರು ಪ್ರೌಢರಾಗುವ ತನಕ (ಅವರ ಸಂರಕ್ಷಣೆಯನ್ನು ವಹಿಸಿಕೊಳ್ಳಿ). ಅಳತೆ ಮತ್ತು ತೂಕ ಮಾಡುವಾಗ ಪೂರ್ಣವಾಗಿ ಮತ್ತು ನ್ಯಾಯಬದ್ಧವಾಗಿ ಮಾಡಿರಿ. ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿರುವುದನ್ನು ನಾವು ಹೊರಿಸುವುದಿಲ್ಲ. ಮಾತನಾಡುವಾಗ (ಸಾಕ್ಷಿ ನುಡಿಯುವಾಗ) ನ್ಯಾಯದಿಂದ ಮಾತನಾಡಿರಿ. ಅದು ನಿಕಟ ಸಂಬಂಧಿಕನಿಗೆ ಸಂಬಂಧಿಸಿದ ವಿಷಯವಾದರೂ ಸಹ. ಅಲ್ಲಾಹನ ಕರಾರನ್ನು ನೆರವೇರಿಸಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ನೆನಪಿಟ್ಟುಕೊಳ್ಳುವುದಕ್ಕಾಗಿ.