ನಿನ್ನೆ ಅವನ ಸ್ಥಾನಮಾನಕ್ಕೆ ತಲುಪಲು ಆಸೆಪಟ್ಟವರು ಇಂದು ಹೀಗೆ ಹೇಳತೊಡಗಿದರು: “ನಿಮಗೆ ಕಾಣುವುದಿಲ್ಲವೇ! ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆ. ಒಂದು ವೇಳೆ ಅಲ್ಲಾಹು ನಮ್ಮ ಮೇಲೆ ಔದಾರ್ಯ ತೋರದಿರುತ್ತಿದ್ದರೆ ನಮ್ಮನ್ನೂ ಭೂಮಿಯಲ್ಲಿ ಹುದುಗಿಸುತ್ತಿದ್ದನು! ನಿಮಗೆ ಕಾಣುವುದಿಲ್ಲವೇ! ಸತ್ಯನಿಷೇಧಿಗಳು ಎಂದಿಗೂ ಯಶಸ್ವಿಯಾಗುವುದಿಲ್ಲ.”