ಹೀಗೆ ಅವನು ಅವರಿಬ್ಬರನ್ನೂ ಮೋಸದಿಂದ ತನ್ನ ಧಾಟಿಗೆ ತಂದನು. ಅವರಿಬ್ಬರೂ ಕೊನೆಗೆ ಆ ಮರದಿಂದ ರುಚಿಯನ್ನು ಸವಿದಾಗ ಅವರ ಗುಹ್ಯಾಂಗಗಳು ಅವರ ಮುಂದೆ ಪ್ರಕಟವಾದವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮರೆಮಾಚತೊಡಗಿದರು. ಮತ್ತು ಅವರ ಪ್ರಭು ಅವರನ್ನು ಕರೆದನು: ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಮತ್ತು ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?