ನೀವು ಅವರ ಬೇಡಿಕೆಯ ಪ್ರಕಾರ ಯಾವುದೇ ದೃಷ್ಟಾಂತಗಳನ್ನು ಅವರ ಮುಂದೆ ಪ್ರಕಟಗೊಳಿಸದಿದ್ದರೆ. ಅವರು (ಹಾಸ್ಯದೊಂದಿಗೆ) ಹೇಳುವರು: ನೀವು ಈ ದೃಷ್ಟಾಂತವನ್ನೇಕೆ ಸ್ವತಃ ರಚಿಸಿ ತರಲಿಲ್ಲ? ಹೇಳಿರಿ: ನನ್ನ ಪ್ರಭುವಿನ ವತಿಯಿಂದ ನನ್ನ ಮೇಲೆ ಕಳುಹಿಸಲಾಗುವ ಆದೇಶವನ್ನು ನಾನು ಅನುಸರಿಸುತ್ತಿದ್ದೇನೆ. ಇವು ನಿಮ್ಮ ಪ್ರಭುವಿನ ಕಡೆಯ ಸಾಕಷ್ಟು ಪುರಾವೆಗಳಾಗಿವೆ ಮತ್ತು ವಿಶ್ವಾಸವಿಡುವ ಜನತೆಗೆ ಮಾರ್ಗದರ್ಶನವೂ, ಕಾರುಣ್ಯವೂ ಆಗಿದೆ.