ಓ ಪೈಗಂಬರರೇ (ಹೇಳಿರಿ) ನೀವು ಪತ್ನಿಯರನ್ನು ವಿಚ್ಛೇದಿಸುವುದಾದರೆ, ಅವರ ಇದ್ದಃ(ನರ್ಮಲ್ಯದ) ಆರಂಭದ ಕಾಲಾವಧಿಯಲ್ಲಿ ವಿಚ್ಛೇದನೆ ನೀಡಿರಿ ಹಾಗೂ ಇದ್ದಃ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. ಅವರು ಸ್ಪಷ್ಟ ಪಾಪಕೃತ್ಯವೆಸಗದೇ ನೀವು ಅವರನ್ನು ಇದ್ದಃ ಅವಧಿಯಲ್ಲಿ ಅವರ ಮನೆಗಳಿಂದ ಹೊರ ಹಾಕಬೇಡಿರಿ, (ಸ್ವತಃ) ಅವರೂ ಹೊರಟು ಹೋಗದಿರಲಿ, ಇವು ಅಲ್ಲಾಹನ ನಿಶ್ಚಿತ ಮೇರೆಗಳು ಮತ್ತು ಅಲ್ಲಾಹನ ಮೇರೆಗಳನ್ನು ಮೀರುವವನೇ ನಿಜವಾಗಿಯೂ ತನ್ನ ಮೇಲೆ ಅಕ್ರಮ ಮಾಡಿದನು ಬಹುಶಃ ಇದ್ದಃದ ಬಳಿಕ ಅಲ್ಲಾಹನು ಯಾವುದಾದರೂ ಹೊಂದಾಣಿಕೆಯ ಹೊಸ ದಾರಿಯನ್ನುಂಟು ಮಾಡಬಹುದು. ಅದು ನಿಮಗೆ ತಿಳಿಯದು.
ಇನ್ನು ಆ ಸ್ತ್ರೀಯರು ತಮ್ಮ ಇದ್ದಃ ಕಾಲಾವಧಿಗೆ ತಲುಪಿದರೆ ಆಗ ನೀವು ಅವರನ್ನು ಉತ್ತಮ ರೀತಿಯಲ್ಲಿ ನಿಮ್ಮ ವಿವಾಹದಲ್ಲಿ ಇರಿಸಿಕೊಳ್ಳಿರಿ ಇಲ್ಲವೇ, ಉತ್ತಮ ರೀತಿಯಲ್ಲಿ ಅವರಿಂದ ಬರ್ಪಡಿರಿ ನಿಮ್ಮ ಪೈಕಿ ನ್ಯಾಯವಂತರಾದ ಇಬ್ಬರನ್ನು ಸಾಕ್ಷಿಗಳನ್ನಾಗಿ ನಿಶ್ಚಯಿಸಿರಿ ಮತ್ತು ನೀವು ಅಲ್ಲಾಹನ ಸಂತೃಪ್ತಿಗೋಸ್ಕರ ಸರಿಯಾದ ನಿಟ್ಟಿನಲ್ಲಿ ಸಾಕ್ಷö್ಯ ನೀಡಿರಿ ಇದೇ ಅಲ್ಲಾಹನಲ್ಲಿ ಅಂತ್ಯ ದಿನದಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೆ ನೀಡಲಾಗುವ ಉಪದೇಶವಾಗಿದೆ, ಯಾರು ಅಲ್ಲಾಹನನ್ನು ಭಯಪಡುತ್ತಾನೆ ಅವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ಮಾಡಿಕೊಡುವನು.
ಅವನು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವನಿಗೆ ಜೀವನಾಧಾರ ಕೊಡುವನು ಅಲ್ಲಾಹನ ಮೇಲೆ ಭರವಸೆಯನ್ನಿಡುವವನಿಗೆ ಅವನೇ ಸಾಕು ಅಲ್ಲಾಹನು ತನ್ನ ಕರ್ಯಗಳನ್ನು ಪರ್ತಿಗೊಳಿಸಿಯೇ ತೀರುವವನಾಗಿದ್ದಾನೆ ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿರುತ್ತಾನೆ.
ನಿಮ್ಮ(ವಿಚ್ಛೇದಿತ) ಸ್ತ್ರೀಯರ ಪೈಕಿ ಋತುಸ್ರಾವದಿಂದ ನಿರಾಶರಾಗಿರುವವರ ಬಗ್ಗೆ ನಿಮಗೆ ಸಂದೇಹವಿದ್ದರೆ ಅವರ ಇದ್ದಃ ಅವಧಿಯು ಮೂರು ತಿಂಗಳುಗಳಾಗಿವೆ ಮತ್ತು ಋತುಮತಿ ಯಾಗದವರಿಗೂ ಇದೇ ನಿಯಮವಿದೆ. ರ್ಭಿಣಿಸ್ತ್ರೀಯರ ಇದ್ದಃ ಅವಧಿಯು ಹೆರಿಗೆಯತನಕವಿದೆ. ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅವನ ವಿಷಯದಲ್ಲೂ ಅಲ್ಲಾಹನು ಅನುಕೂಲತೆಯನ್ನು ಉಂಟುಮಾಡುವವನು.
ಇದು ಅಲ್ಲಾಹನು ನಿಮ್ಮೆಡೆಗೆ ಅವತರ್ಣಗೊಳಿಸಿರುವ ಅಜ್ಞೆಯಾಗಿದೆ ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅಲ್ಲಾಹನು ಅವನ ಪಾಪಗಳನ್ನು ಅಳಿಸುವನು ಹಾಗೂ ಅವನಿಗೆ ಮಹಾ ಪ್ರತಿಫಲವನ್ನು ನೀಡುವನು.
ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕಾಗಿ ತೊಂದರೆಕೊಡಬೇಡಿ ಮತ್ತು ಅವರು ರ್ಭಿಣಿಗಳಾಗಿದ್ದರೆ ಹೆರಿಗೆಯತನಕ ಅವರಿಗೆ ರ್ಚು ನೀಡಿರಿ. ಇನ್ನು ನಿಮ್ಮ ಮಾತಿಗೆ ಒಪ್ಪಿ ಅವರೇ ಹಾಲುಣಿಸಿದರೆ ಅವರಿಗೆ ಅವರ ಪ್ರತಿಫಲವನ್ನು ಕೊಟ್ಟುಬಿಡಿ ಮತ್ತು ಉತ್ತಮ ರೀತಿಯಲ್ಲಿ ಪರಸ್ಪರ ಸಮಾಲೋಚಿಸಿರಿ ಇನ್ನು ನೀವು ಪರಸ್ಪರ ಕ್ಲಿಷ್ಟತೆತೋರುವುದಾದರೆ ಬೇರೊಬ್ಬಳು ಮಗುವಿಗೆ ಹಾಲುಣಿಸುವಳು.
ಸ್ಥಿತಿವಂತನು ತನ್ನ ಸ್ಥಿತಿಗೆ ಅನುಗುಣವಾಗಿ ರ್ಚು ಮಾಡಲಿ ಮತ್ತು ಯಾರ ಜೀವನಾಧಾರವು ಪರಿಮಿತವಾಗಿದೆಯೋ ಅವನು ತನಗೆ ಅಲ್ಲಾಹನು ನೀಡಿರುವುದರಿಂದ ರ್ಚು ಮಾಡಲಿ. ಅಲ್ಲಾಹನು ಯಾವೊಬ್ಬ ವ್ಯಕ್ತಿಗೂ ಅವನಿಗೆ ನೀಡಿರುವುದುದಕ್ಕಿಂತ ಹೆಚ್ಚು ಭಾರವನ್ನು ಹೊರಿಸುವುದಿಲ್ಲ. ಸದ್ಯವೇ ಅಲ್ಲಾಹನು ಸಂಕಷ್ಟದ ಬಳಿಕ ಅನುಕೂಲತೆಯನ್ನು ಮಾಡಲಿರುವನು.
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಜವಾಗಿಯೂ ಅಲ್ಲಾಹನು ನಿಮ್ಮೆಡೆಗೆ ಉದ್ಭೋದೆಯನ್ನು ಅವತರ್ಣಗೊಳಿಸಿ ರುತ್ತಾನೆ.
ಅಲ್ಲಾಹನ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲು ನಿಮಗೂ ಒಬ್ಬ ಸಂದೇಶವಾಹಕನನ್ನು ನಿಯೋಜಿಸಿದನು. ಇದು ಸತ್ಯ ವಿಶ್ವಾಸವಿರಿಸಿ, ಸತ್ರ್ಮಗಳನ್ನು ಕೈಗೊಂಡವರನ್ನು ಅವನು ಅಂಧಕಾರಗಳಿಂದ ಪ್ರಕಾಶದ ಕಡೆಗೆ ಹೊರತರಲೆಂದಾಗಿದೆ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ್ಮವನ್ನು ಕೈಗೊಳ್ಳುತ್ತಾನೋ ಅಲ್ಲಾಹನು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು ಅವರು ಅದರಲ್ಲಿ ಶಾಶ್ವತವಾಗಿರುವರು, ನಿಸ್ಸಂಶಯವಾಗಿಯೂ ಅಲ್ಲಾಹನು ಅವನಿಗೆ ಅತ್ಯುತ್ತಮ ಜೀವನಾಧಾರವನ್ನು ನೀಡಿರುವನು.
ಅಲ್ಲಾಹನೆಂದರೆ ಏಳು ಆಕಾಶಗಳನ್ನು, ಅವುಗಳಷ್ಟೇ ಭೂಮಿಯನ್ನು ಸೃಷ್ಟಿಸಿದವನು. ಅವುಗಳ ನಡುವೆ ಅವನ ಆದೇಶಗಳು ಇಳಿಯುತ್ತವೆ. ಇದೇಕೆಂದರೆ ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾರ್ಥ್ಯವುಳ್ಳವನೆಂದು ಮತ್ತು ತನ್ನ ಜ್ಞಾನದ ಮೂಲಕ ಸಕಲ ವಸ್ತುಗಳನ್ನು ಆವರಿಸಿರುವನೆಂದು ನೀವು ತಿಳಿಯಲೆಂದಾಗಿದೆ.