ಅವನೇ ಸತ್ಯನಿಷೇಧಿಗಳ ಕೈಗಳನ್ನು ನಿಮ್ಮಿಂದಲೂ ಮತ್ತು ನಿಮ್ಮ ಕೈಗಳನ್ನು ಅವರಿಂದಲೂ ಮಕ್ಕಾಃ ಕಣಿವೆಯಲ್ಲಿ ತಡೆದನು, ಬಳಿಕ ಅವನು ನಿಮಗೆ ಅವರ ಮೇಲೆ ವಿಜಯ ದಯಪಾಲಿಸಿದನು, ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
ಅವರೇ ಸತ್ಯನಿಷೇಧಿಸಿದವರು ಮತ್ತು ನಿಮ್ಮನ್ನು ಮಸ್ಜಿದುಲ್ ಹರಾಮ್ ನಿಂದ ತಡೆದವರು ಹಾಗೂ ಬಲಿಮೃಗಗಳನ್ನು ಅವುಗಳ ಬಲಿತಾಣಗಳಿಗೆ ತಲುಪುವುದರಿಂದ (ತಡೆದವರು) ನೀವು ಅರಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರು ಮಕ್ಕಾಃದಲ್ಲಿ (ಸತ್ಯನಿಷೇಧಿಗಳೊಂದಿಗೆ) ಇಲ್ಲದಿರುತ್ತಿದ್ದರೆ ಆ ಸಂದರ್ಭದಲ್ಲಿ ನಿಮಗೆ ಯುದ್ಧದ ಅನುಮತಿ ಸಿಕ್ಕಿದರೆ ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಆ ಸ್ಥಿತಿಯಲ್ಲಿ ಅವರನ್ನು) ವಧಿಸಿರುವುದರಿಂದ ನಿಮಗೆ ಅಪಾಯ ತಟ್ಟುವ ಸಂಭವವಿರುತ್ತಿತ್ತು. ಇದೇಕೆಂದರೆ ಅಲ್ಲಾಹನು ತಾನಿಚ್ಛಿಸುವವರನ್ನು ತನ್ನ ಕಾರುಣ್ಯದಲ್ಲಿ ಸೇರಿಸಲೆಂದಾಗಿದೆ. ಇನ್ನು ಅವರು ಬೇರೆಬೇರೆಯಾಗಿರುತ್ತಿದ್ದರೆ ನಾವು ಅವರ ಪೈಕಿಯ ಸತ್ಯನಿಷೇಧಿಗಳಿಗೆ ವೇದನಾಜನಕ ಯಾತನೆಯನ್ನು ಕೊಡುತ್ತಿದ್ದೆವು.
ಸತ್ಯನಿಷೇಧಿಗಳು ತಮ್ಮ ಹೃದಯಗಳಲ್ಲಿ ಅಜ್ಞಾನ ಕಾಲದ ದುರಭಿಮಾನವನ್ನು ನೆಲೆಗೊಳಿಸಿದಾಗ! ಅಲ್ಲಾಹನು ತನ್ನ ಸಂದೇಶವಾಹಕನ ಮತ್ತು ಸತ್ಯವಿಶ್ವಾಸಿಗಳ ಮೇಲೆ ತನ್ನೆಡೆಯ ಶಾಂತಿ ನೆಮ್ಮದಿಯನ್ನು ಇಳಿಸಿದನು ಮತ್ತು ಅಲ್ಲಾಹನು ಸತ್ಯವಿಶ್ವಾಸಿಗಳಿಗೆ ಭಯಭಕ್ತಿಯ ಮಾತಿಗೆ ಬದ್ಧರನ್ನಾಗಿಸಿದನು. ಅವರೇ (ಆ ಭಯಭಕ್ತಿಯನ್ನು ಸ್ವೀಕರಿಸಲು) ಹೆಚ್ಚು ಅರ್ಹತೆಯುಳ್ಳವರೂ ಆಗಿದ್ದರು ಮತ್ತು ಅಲ್ಲಾಹನು ಪ್ರತಿಯೊಂದು ಸಂಗತಿಯನ್ನು ಚೆನ್ನಾಗಿ ಅರಿಯುತ್ತಾನೆ.
ನಿಜವಾಗಿಯೂ ಅಲ್ಲಾಹನು ತನ್ನ ಸಂದೇಶವಾಹಕರ ಕನಸನ್ನು ನನಸಾಗಿ ಮಾಡಿದನು, ಆದರೆ ಅಲ್ಲಾಹನಿಚ್ಛಿಸಿದರೆ ನೀವು ನಿರ್ಭಯತೆ ಹಾಗು ಸುರಕ್ಷತೆಯೊಂದಿಗೆ ಕೇಶ ಮುಂಡನ ಮಾಡಿಸುತ್ತಾ ಮತ್ತು ತಲೆಗೂದಲನ್ನು ಕತ್ತರಿಸುತ್ತಾ ಯಾವುದೇ ಭಯವಿಲ್ಲದೇ ಖಂಡಿತ ಮಸ್ಜಿದುಲ್ಹರಾಮನ್ನು ಪ್ರವೇಶಿಸುವಿರಿ. ನೀವು ಅರಿಯದಿದ್ದನ್ನು ಅವನು ಅರಿಯುತ್ತಾನೆ. ಇದಕ್ಕೆ ಮೊದಲು ಅವನು ನಿಮಗೆ ಸನ್ನಿಹಿತ ಖೈಬರ್ ವಿಜಯವೊಂದನ್ನು ದಯಪಾಲಿಸಿದನು.
ಅವನೇ ತನ್ನ ಸಂದೇಶವಾಹಕರನನ್ನು ಮಾರ್ಗದರ್ಶನದೊಂದಿಗೆ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದನು, ಇದೇಕೆಂದರೆ ಅದನ್ನು ಸಕಲ ಧರ್ಮಗಳ ಮೇಲೆ ವಿಜಯಸಾಧಿಸಲೆಂದಾಗಿದೆ ಮತ್ತು ಸಾಕ್ಷಿಯಾಗಿ ಅಲ್ಲಾಹನೇ ಸಾಕು.