ಓ ಗ್ರಂಥದವರೇ, ನೀವು ನಿಮ್ಮ ಧರ್ಮದ ವಿಷಯದಲ್ಲಿ ಮಿತಿಮೀರದಿರಿ. ಅಲ್ಲಾಹನ ಹೆಸರಿನಲ್ಲಿ ಸತ್ಯವನ್ನಲ್ಲದೇ ಇನ್ನೇನನ್ನೂ ಹೇಳಬೇಡಿರಿ. ಮರ್ಯಮರ ಮಗನಾದ ಮಸೀಹ ಈಸಾ ಕೇವಲ ಅಲ್ಲಾಹನ ಸಂದೇಶವಾಹಕರೂ, ಮತ್ತು ಮರ್ಯಮರ ಕಡೆಗೆ ಹಾಕಲಾದ ಅವನ ವಚನವೂ ಮತ್ತು ಅವನ ಕಡೆಯ ಒಂದು ಆತ್ಮವೂ ಮಾತ್ರ ಆಗಿರುವರು. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡಿರಿ ಮತ್ತು ತ್ರೀಏಕತ್ವ ಎಂದು ಹೇಳಬೇಡಿರಿ. ನೀವು (ಹಾಗೆ ಹೇಳುವುದನ್ನು) ಬಿಟ್ಟುಬಿಡಿರಿ ಅದುವೇ ನಿಮಗೆ ಉತ್ತಮವಾಗಿದೆ, ಅಲ್ಲಾಹನು ಮಾತ್ರ ಏಕಮೇವ ಆರಾಧ್ಯನಾಗಿದ್ದಾನೆ. ತನಗೆ ಸಂತಾನವು ಉಂಟಾಗುವುದರಿAದ ಅವನು ಅದೆಷ್ಟೋ ಪಾವನನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದೇ ಆಗಿದೆ. ಕಾರ್ಯ ನಿರ್ವಾಹಕನಾಗಿ ಅಲ್ಲಾಹನೇ ಸಾಕು.