ಮತ್ತು ಕಹಳೆಯನ್ನು ಊದಲಾದಾಗ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರು ಮೂರ್ಛೆತಪ್ಪಿ ಹೋಗುವರು. ಆದರೆ ಅಲ್ಲಾಹನು ಇಚ್ಛಿಸಿದವರ ಹೊರತು. ಅನಂತರ ಪುನಃ ಕಹಳೆಯನ್ನು ಊದಲಾದಾಗ ಒಮ್ಮೇಲೆ ಅವರು ಎದ್ದು ನಿಂತು ವೀಕ್ಷಿಸುವರು.
ಭೂಮಿಯು ತನ್ನ ಪ್ರಭುವಿನ ಪ್ರಕಾಶದಿಂದ ಬೆಳಗುವುದು ಮತ್ತು ಕರ್ಮ ಗ್ರಂಥಗಳನ್ನು ಇರಿಸಲಾಗುವುದು ಮತ್ತು ಪ್ರವಾದಿಗಳನ್ನೂ, ಸಾಕ್ಷಿಗಳನ್ನೂ ತರಲಾಗುವುದು ಮತ್ತು ಜನರ ನಡುವೆ ಸತ್ಯದೊಂದಿಗೆ ತೀರ್ಪು ನೀಡಲಾಗುವುದು ಮತ್ತು ಅವರು ಅನ್ಯಾಯಕ್ಕೊಳಗಾಗ ಲಾರರು.
ಮತ್ತು ಸತ್ಯನಿಷೇಧಿಗಳನ್ನು ನರಕದೆಡೆಗೆ ತಂಡೋಪತAಡವಾಗಿ ಅಟ್ಟಲಾಗುವುದು. ಅವರು ಅಲ್ಲಿಗೆ ತಲುಪಿದಾಗ ಅದರ ದ್ವಾರಗಳು ತೆರೆಯಲಾಗುವುವು ಮತ್ತು ಅವರೊಂದಿಗೆ ಅದರ ಕಾವಲುಗಾರರು ಕೇಳುವರು: ನಿಮ್ಮ ಮುಂದೆ ನಿಮ್ಮ ಪ್ರಭುವಿನ ಸೂಕ್ತಿಗಳನ್ನು ಓದುವ ಮತ್ತು ನಿಮ್ಮನ್ನು ಈ ದಿನದ ಭೇಟಿಯ ಬಗ್ಗೆ ಎಚ್ಚರಿಸುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿ ಬಂದಿರಲಿಲ್ಲವೇ ? ಆಗ ಅವರು ಹೇಳುವರು: ಹೌದು ಬಂದಿದ್ದರು. ಆದರೆ ಸತ್ಯನಿಷೇಧಿಗಳ ಮೇಲೆ ಯಾತನೆಯ ವಚನವು ಸಾಬೀತುಗೊಂಡಿದೆ.
ಇನ್ನು ತಮ್ಮ ಪ್ರಭುವನ್ನು ಭಯಪಡುವವರು ಸ್ವರ್ಗದೆಡೆಗೆ ತಂಡೋಪ ತಂಡವಾಗಿ ಕರೆದೊಯ್ಯಲಾಗುವರು. ಅವರು ಅಲ್ಲಿಗೆ ತಲುಪಿದಾಗ ಅದರ ದ್ವಾರಗಳು ತೆÉರೆಯಲಾಗುವುದು. ಅದರ ಕಾವಲುಗಾರರು ಅವರಿಗೆ ಹೇಳುವರು: ನಿಮ್ಮ ಮೇಲೆ ಶಾಂತಿ ಇರಲಿ. ನೀವು ಸಂತುಷ್ಟರಾಗಿರಿ. ಮತ್ತು ಇದರಲ್ಲಿ ಶಾಶ್ವತವಾಗಿ ಪ್ರವೇಶಿಸಿರಿ.
ಅವರು ಹೇಳುವರು: ನಮ್ಮೊಂದಿಗೆ ತನ್ನ ವಾಗ್ದಾನವನ್ನು ಸತ್ಯವನ್ನಾಗಿಸಿ ನಮ್ಮನ್ನು ಈ ನೆಲದ ವಾರೀಸುದಾರರನ್ನಾಗಿ ಮಾಡಿದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು. ಸ್ವರ್ಗದಲ್ಲಿ ನಾವು ಇಚ್ಛಿಸಿದ ಕಡೆ ನೆಲೆಸಬಹುದು. ಸತ್ಕರ್ಮಿಗಳ ಪ್ರತಿಫಲವು ಅದೆಷ್ಟು ಉತ್ತಮವಾದುದು!