ಸತ್ಯ ನಿಷೇಧಿಗಳು ನಿಮ್ಮನ್ನು ಕಂಡಾಗ ನಿಮ್ಮ ದೇವರುಗಳ ಖಂಡನಾತ್ಮಕ ಪ್ರಸ್ತಾಪ ಮಾಡುವವನು ಇವನೇ ಎನು? ಎಂದು ಪರಿಹಾಸ್ಯ ಮಾಡುತ್ತಾರೆ ಮತ್ತು ಅವರಾದರೂ ಪರಮ ದಯಾಮಯನ ಸ್ಮರಣೆಯನ್ನು ನಿರಾಕರಿಸುತ್ತಾರೆ.
ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ ಕೇಳಿರಿ. ನಿಜವಾಗಿಯೂ ಅವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.
ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?