ಅನಂತರ ಪ್ರಳಯ ದಿನಂದAದು ಅಲ್ಲಾಹನು ಅವರನ್ನು ಅಪಮಾನಗೊಳಿಸುವನು. ಮತ್ತು ಹೇಳುವನು: ನೀವು ಯಾರ ವಿಚಾರವಾಗಿ (ಸತ್ಯವಿಶ್ವಾಸಿಗಳೊಡನೆ) ಜಗಳವಾಡುತ್ತಿದ್ದಿರೋ ಆ ನನ್ನ ಸಹಭಾಗಿಗಳು ಎಲ್ಲಿದ್ದಾರೆ? ಜ್ಞಾನ ನೀಡಲ್ಪಟ್ಟವರು ಹೇಳುವರು: ನಿಶ್ಚಯವಾಗಿಯು ಇಂದಿನ ದಿನವಂತು ಸತ್ಯನಿಷೇಧಿಗಳಿಗೆ ಅಪಮಾನ ಮತ್ತು ಕೆಡುಕು ಅಂಟಿಕೊAಡು ಬಿಟ್ಟಿತು.
ತಮ್ಮ ಮೇಲೆಯೇ ಅಕ್ರಮವೆಸಗುತ್ತಿರುವ ಸ್ಥಿತಿಯಲ್ಲಿ ಸತ್ಯನಿಷೇಧಿಗಳ ಪ್ರಾಣವನ್ನು ಮಲಕ್ಗಳು ವಶಪಡಿಸಿಕೊಳ್ಳುವಾಗ ಅವರು ಸಂಪೂರ್ಣವಾಗಿ ಶರಣಾಗುವರು; ಅವರು ಹೇಳುವರು ನಾವು ದುಷ್ಕೃತ್ಯವನ್ನು ಎಸಗುತ್ತಿರಲಿಲ್ಲ. (ಹೇಳಲಾಗುವುದು) ಯಾಕಿಲ್ಲ? ನೀವು ಮಾಡುತ್ತಿದ್ದ ದುಷ್ಕರ್ಮಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.
ಮತ್ತು ಭಯಭಕ್ತಿಯನ್ನಿರಿಸಿಕೊಂಡವರೊAದಿಗೆ: ನಿಮ್ಮ ಪ್ರಭುವು ಏನನ್ನು ಅವತೀರ್ಣಗೊಳಿಸಿರುವನು? ಎಂದು ಕೇಳಲಾದಾಗ ಅವರು ಉತ್ತರಿಸುವರು: ಅತ್ಯುತ್ತಮವಾದುದ್ದನ್ನು ಸಜ್ಜನರಿಗೆ ಇಹಲೋಕದಲ್ಲೂ ಒಳಿತಿದೆ. ಮತ್ತು ಪರಲೋಕ ಭವನವಂತು ಅತ್ಯುತ್ತಮವಾಗಿರುವುದು ಮತ್ತು ಭಯಭಕ್ತಿಯುಳ್ಳವರ ಭವನವು ಅದೆಷ್ಟು ಉತ್ತಮವಾದುದು!
ಶಾಶ್ವತ ನಿವಾಸವಾದ ಸ್ವರ್ಗೋದ್ಯಾನಗಳಲ್ಲಿ ಅವರು ಪ್ರವೇಶಿಸುವರು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅಲ್ಲಿ ಅವರು ಇಚ್ಛಿಸುವುದೆಲ್ಲವೂ ಅವರಿಗಿರುವುದು. ಅಲ್ಲಾಹನು ಭಯ ಭಕ್ತಿಯುಳ್ಳವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತಾನೆ.
ಮಲಕ್ಗಳು ಅವರ ಪ್ರಾಣವನ್ನು ಅವರು ಪರಿಶುದ್ಧರಾಗಿರುವ ಸ್ಥಿತಿಯಲ್ಲಿ ವಶಪಡಿಸಿಕೊಳ್ಳುವರು. ನಿಮ್ಮ ಮೇಲೆ ಶಾಂತಿ ಇರಲಿ. ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ಸ್ವರ್ಗೋದ್ಯಾನವನ್ನು ಪ್ರವೇಶಿಸಿರಿ ಎನ್ನುವರು.
ಇವರು ತಮ್ಮ ಬಳಿಗೆ ದೇವಚರರು ಬರಲಿ ಅಥವಾ ನಿಮ್ಮ ಪ್ರಭುವಿನ ಆದೇsÀಶವು ಬರಲಿ ಎಂದೇ ನಿರೀಕ್ಷಿಸುತ್ತಿದ್ದಾರೆಯೇ? ಇವರ ಮುಂಚಿನವರು ಸಹ ಇದೇ ಪ್ರಕಾರ ಮಾಡಿದ್ದರು ಅವರ ಮೇಲೆ ಅಲ್ಲಾಹನು ಯಾವುದೇ ಅಕ್ರಮವನ್ನೆಸಗಲಿಲ್ಲ ಬದಲಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.