[1] ಅಂದರೆ ಅವರು ಮುಸ್ಲಿಮರಾಗುವಂತೆ ಮಾಡಲು ಅಲ್ಲಾಹನಿಗೆ ಸಾಧ್ಯವಿದೆ. ಮಕ್ಕಾ ವಿಜಯದ ನಂತರ ಇದು ಸತ್ಯವಾಯಿತು. ಮುಸ್ಲಿಮರ ವೈರಿಗಳಾಗಿದ್ದವರು ತಂಡೋಪತಂಡವಾಗಿ ಇಸ್ಲಾಂ ಸ್ವೀಕರಿಸಿದರು.
[1] ಹುದೈಬಿಯಾ ಒಪ್ಪಂದದ ಒಂದು ಷರತ್ತಿನ ಪ್ರಕಾರ ಮಕ್ಕಾದಿಂದ ಯಾರಾದರೂ ಮುಸಲ್ಮಾನರ ಬಳಿಗೆ ಬಂದರೆ ಅವರನ್ನು ಮಕ್ಕಾಗೆ ಮರಳಿ ಕಳುಹಿಸಬೇಕು. ಇಂತಹ ಸ್ಥಿತಿಯಲ್ಲಿ ಸತ್ಯನಿಷೇಧಿ ಮಹಿಳೆಯರು ಇಸ್ಲಾಂ ಸ್ವೀಕರಿಸಿ ಮುಸಲ್ಮಾನರ ಬಳಿಗೆ ಬಂದರೆ ಏನು ಮಾಡಬೇಕೆಂದು ಈ ವಚನದಲ್ಲಿ ಹೇಳಲಾಗಿದೆ. ಮುಸ್ಲಿಮರು ಅವರನ್ನು ಸತ್ಯನಿಷೇಧಿಗಳ ಬಳಿಗೆ ಮರಳಿ ಕಳುಹಿಸಬಾರದು. ಅವರು ಸತ್ಯನಿಷೇಧಿಗಳಿಗೆ ಧರ್ಮಸಮ್ಮತವಲ್ಲ. ಅವರ ಗಂಡಂದಿರು ಅವರಿಗೆ ನೀಡಿದ ಮಹರ್ ಅವರಿಗೆ ವಾಪಸು ಕೊಟ್ಟು ಅವರನ್ನು ವಿಚ್ಛೇದಿಸಬೇಕು. ಇದ್ದ ಕಳೆದ ನಂತರ ಮುಸ್ಲಿಮರಿಗೆ ಆಕೆಯನ್ನು ಮಹರ್ ನೀಡಿ ವಿವಾಹವಾಗಬಹುದು. ಅವರನ್ನು ಪರೀಕ್ಷಿಸಬೇಕು ಎಂದರೆ ಅವರು ಯಾವ ಉದ್ದೇಶದಿಂದ ಬಂದಿದ್ದಾರೆಂದು ತನಿಖೆ ಮಾಡಬೇಕು ಎಂದರ್ಥ.
[2] ಅಂದರೆ ಮುಸಲ್ಮಾನರ ಪತ್ನಿಯರಲ್ಲಿ ಯಾರಾದರೂ ಸತ್ಯನಿಷೇಧಿಯಾಗಿದ್ದರೆ ಅವಳೊಂದಿಗಿನ ದಾಂಪತ್ಯವನ್ನು ಮುಂದುವರಿಸಬಾರದು. ಆಕೆಗೆ ವಿಚ್ಛೇದನ ನೀಡಿ ಮಹರ್ ವಾಪಸು ಪಡೆಯಬೇಕು.