വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ

പേജ് നമ്പർ:close

external-link copy
65 : 19

رَبُّ السَّمٰوٰتِ وَالْاَرْضِ وَمَا بَیْنَهُمَا فَاعْبُدْهُ وَاصْطَبِرْ لِعِبَادَتِهٖ ؕ— هَلْ تَعْلَمُ لَهٗ سَمِیًّا ۟۠

ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾಳ್ಮೆಯಿಂದಿರಿ. ಅವನಿಗೆ ಸರಿಸಾಟಿಯಾಗಿ ಯಾರಾದರೂ ಇರುವುದು ನಿಮಗೆ ತಿಳಿದಿದೆಯೇ? info
التفاسير:

external-link copy
66 : 19

وَیَقُوْلُ الْاِنْسَانُ ءَاِذَا مَا مِتُّ لَسَوْفَ اُخْرَجُ حَیًّا ۟

ಮನುಷ್ಯನು ಹೇಳುತ್ತಾನೆ: “ನಾನು ಸತ್ತರೆ ನನ್ನನ್ನು ಪುನಃ ಜೀವಂತಗೊಳಿಸಿ ಹೊರತರಲಾಗುತ್ತದೆಯೇ?” info
التفاسير:

external-link copy
67 : 19

اَوَلَا یَذْكُرُ الْاِنْسَانُ اَنَّا خَلَقْنٰهُ مِنْ قَبْلُ وَلَمْ یَكُ شَیْـًٔا ۟

ಆದರೆ ಮನುಷ್ಯನಿಗೆ ಅಸ್ತಿತ್ವವೇ ಇಲ್ಲದಿದ್ದಾಗ ನಾವು ಅವನನ್ನು ಪ್ರಥಮ ಬಾರಿ ಸೃಷ್ಟಿಸಿದ್ದು ಅವನಿಗೆ ನೆನಪಿಲ್ಲವೇ? info
التفاسير:

external-link copy
68 : 19

فَوَرَبِّكَ لَنَحْشُرَنَّهُمْ وَالشَّیٰطِیْنَ ثُمَّ لَنُحْضِرَنَّهُمْ حَوْلَ جَهَنَّمَ جِثِیًّا ۟ۚ

ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಖಂಡಿತವಾಗಿಯೂ ಅವರನ್ನು ಮತ್ತು ಶೈತಾನರನ್ನು ಒಟ್ಟುಗೂಡಿಸಿ, ನಂತರ ಅವರನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ನರಕದ ಸುತ್ತಲೂ ಹಾಜರುಪಡಿಸುವೆವು. info
التفاسير:

external-link copy
69 : 19

ثُمَّ لَنَنْزِعَنَّ مِنْ كُلِّ شِیْعَةٍ اَیُّهُمْ اَشَدُّ عَلَی الرَّحْمٰنِ عِتِیًّا ۟ۚ

ನಂತರ ಎಲ್ಲಾ ಗುಂಪುಗಳಿಂದಲೂ ಪರಮ ದಯಾಮಯನಿಗೆ (ಅಲ್ಲಾಹನಿಗೆ) ಕಡು ದ್ರೋಹವೆಸಗಿದವರನ್ನು ಎಳೆದು ಬೇರ್ಪಡಿಸುವೆವು. info
التفاسير:

external-link copy
70 : 19

ثُمَّ لَنَحْنُ اَعْلَمُ بِالَّذِیْنَ هُمْ اَوْلٰی بِهَا صِلِیًّا ۟

ನಂತರ ನರಕದಲ್ಲಿ ಉರಿಯಲು ಅವರಲ್ಲಿ ಅತ್ಯಂತ ಅರ್ಹರು ಯಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ. info
التفاسير:

external-link copy
71 : 19

وَاِنْ مِّنْكُمْ اِلَّا وَارِدُهَا ۚ— كَانَ عَلٰی رَبِّكَ حَتْمًا مَّقْضِیًّا ۟ۚ

ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ (ನರಕದ) ಬಳಿಗೆ ಬರುವರು. ಅದು ತಮ್ಮ ಪರಿಪಾಲಕನ (ಅಲ್ಲಾಹನ) ಖಚಿತ ಹಾಗೂ ಬದಲಾವಣೆಯಿಲ್ಲದ ತೀರ್ಮಾನವಾಗಿದೆ.[1] info

[1] ನರಕದ ಮೇಲ್ಭಾಗದಲ್ಲಿ ಒಂದು ಸೇತುವೆಯನ್ನು ನಿರ್ಮಿಸಲಾಗುವುದು. ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳೆಲ್ಲರೂ ಆ ಸೇತುವೆಯನ್ನು ದಾಟಲು ಪ್ರಯತ್ನಿಸುವರು. ಸತ್ಯವಿಶ್ವಾಸಿಗಳು ತಮ್ಮ ತಮ್ಮ ಕರ್ಮಗಳಿಗೆ ಅನುಗುಣವಾಗಿ ಆ ಸೇತುವೆಯನ್ನು ದಾಟುವರು. ಕೆಲವರು ಕಣ್ಣೆವೆಯಿಕ್ಕುವ ವೇಗದಲ್ಲಿ, ಕೆಲವರು ಮಿಂಚಿನ ವೇಗದಲ್ಲಿ, ಕೆಲವರು ಹಕ್ಕಿ ಹಾರುವ ವೇಗದಲ್ಲಿ, ಕೆಲವರು ಕುದುರೆಗಳ ವೇಗದಲ್ಲಿ ದಾಟುವರು. ದುಷ್ಕರ್ಮಿಗಳಾದ ಸತ್ಯವಿಶ್ವಾಸಿಗಳು ದಾಟಲು ಸಾಧ್ಯವಾಗದೆ ನರಕದಲ್ಲಿ ಬೀಳುವರು. ಅವರನ್ನು ನಂತರ ಶಿಫಾರಸು ಮಾಡುವ ಮೂಲಕ ಅಥವಾ ಅವರ ಶಿಕ್ಷೆ ಮುಗಿದ ಬಳಿಕ ನರಕದಿಂದ ಪಾರು ಮಾಡಲಾಗುವುದು. ಆದರೆ ಸತ್ಯನಿಷೇಧಿಗಳಿಗೆ ಆ ಸೇತುವೆಯನ್ನು ದಾಟಲು ಸಾಧ್ಯವಾಗದೆ ಎಲ್ಲರೂ ನರಕದಲ್ಲಿ ಬೀಳುವರು. ಅದರಲ್ಲೇ ಶಾಶ್ವತವಾಗಿ ವಾಸಿಸುವರು.

التفاسير:

external-link copy
72 : 19

ثُمَّ نُنَجِّی الَّذِیْنَ اتَّقَوْا وَّنَذَرُ الظّٰلِمِیْنَ فِیْهَا جِثِیًّا ۟

ನಂತರ ನಾವು ದೇವಭಯವುಳ್ಳವರನ್ನು ರಕ್ಷಿಸಿ, ಅಕ್ರಮವೆಸಗಿದವರನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅಲ್ಲೇ ಬಿಟ್ಟುಬಿಡುವೆವು. info
التفاسير:

external-link copy
73 : 19

وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالَ الَّذِیْنَ كَفَرُوْا لِلَّذِیْنَ اٰمَنُوْۤا ۙ— اَیُّ الْفَرِیْقَیْنِ خَیْرٌ مَّقَامًا وَّاَحْسَنُ نَدِیًّا ۟

ನಮ್ಮ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಅವರಿಗೆ ಓದಿಕೊಡಲಾದರೆ, ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಸ್ಥಾನಮಾನ ಮತ್ತು ಜನಬಲದ ದೃಷ್ಟಿಯಲ್ಲಿ ನಮ್ಮ ಈ ಎರಡು ಗುಂಪುಗಳಲ್ಲಿ ಯಾರು ಶ್ರೇಷ್ಠರು?”[1] info

[1] ಮಕ್ಕಾದಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ಪೈಕಿ ಅತ್ಯಧಿಕ ಸ್ಥಾನಮಾನ ಮತ್ತು ಜನಬಲವುಳ್ಳವರು ಯಾರೆಂದು ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಾ ಸತ್ಯನಿಷೇಧಿಗಳು ಕೇಳುತ್ತಿದ್ದರು. ಏಕೆಂದರೆ, ಮಕ್ಕಾದ ಮುಖಂಡರು ಮತ್ತು ಶ್ರೀಮಂತರಲ್ಲಿ ಹೆಚ್ಚಿನವರೂ ಸತ್ಯನಿಷೇಧಿಗಳಾಗಿದ್ದರು.

التفاسير:

external-link copy
74 : 19

وَكَمْ اَهْلَكْنَا قَبْلَهُمْ مِّنْ قَرْنٍ هُمْ اَحْسَنُ اَثَاثًا وَّرِﺋْﻴًﺎ ۟

ನಾವು ಅವರಿಗಿಂತ ಮೊದಲು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಅವರು ಸವಲತ್ತುಗಳು ಮತ್ತು ದೇಹದಾರ್ಢ್ಯದಲ್ಲಿ ಇವರಿಗಿಂತಲೂ ಶ್ರೇಷ್ಠರಾಗಿದ್ದರು. info
التفاسير:

external-link copy
75 : 19

قُلْ مَنْ كَانَ فِی الضَّلٰلَةِ فَلْیَمْدُدْ لَهُ الرَّحْمٰنُ مَدًّا ۚ۬— حَتّٰۤی اِذَا رَاَوْا مَا یُوْعَدُوْنَ اِمَّا الْعَذَابَ وَاِمَّا السَّاعَةَ ؕ۬— فَسَیَعْلَمُوْنَ مَنْ هُوَ شَرٌّ مَّكَانًا وَّاَضْعَفُ جُنْدًا ۟

ಹೇಳಿರಿ: “ಯಾರು ದುರ್ಮಾರ್ಗದಲ್ಲಿದ್ದಾನೋ ಅವನಿಗೆ ಪರಮ ದಯಾಮಯನು (ಅಲ್ಲಾಹು) ಅವಧಿಯನ್ನು ವಿಸ್ತರಿಸಿಕೊಡಲಿ. ಎಲ್ಲಿಯವರೆಗೆಂದರೆ, ಅವರು ತಮಗೆ ಎಚ್ಚರಿಕೆ ನೀಡಲಾದ ಸಂಗತಿಯನ್ನು—ಅಂದರೆ ಒಂದೋ ಶಿಕ್ಷೆಯನ್ನು ಅಥವಾ ಅಂತ್ಯಸಮಯವನ್ನು—ಕಾಣುವಾಗ, ಅತಿನಿಕೃಷ್ಟ ಸ್ಥಾನಮಾನವಿರುವವರು ಮತ್ತು ಅತಿ ದುರ್ಬಲ ಜನಬಲವು ಯಾರದ್ದೆಂದು ಅವರು ಬಹಳ ಚೆನ್ನಾಗಿ ತಿಳಿಯುವರು.” info
التفاسير:

external-link copy
76 : 19

وَیَزِیْدُ اللّٰهُ الَّذِیْنَ اهْتَدَوْا هُدًی ؕ— وَالْبٰقِیٰتُ الصّٰلِحٰتُ خَیْرٌ عِنْدَ رَبِّكَ ثَوَابًا وَّخَیْرٌ مَّرَدًّا ۟

ಸನ್ಮಾರ್ಗದಲ್ಲಿರುವವರಿಗೆ ಅಲ್ಲಾಹು ಸನ್ಮಾರ್ಗವನ್ನು ಹೆಚ್ಚಿಸಿಕೊಡುವನು. ಆದರೆ ಬಾಕಿಯಾಗುವ ಸತ್ಕರ್ಮಗಳು ತಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅತ್ಯುತ್ತಮ ಪ್ರತಿಫಲವನ್ನು ಮತ್ತು ಅತ್ಯುತ್ತಮ ಫಲಿತಾಂಶವನ್ನು ಹೊಂದಿವೆ. info
التفاسير: