[1] ನರಕದ ಮೇಲ್ಭಾಗದಲ್ಲಿ ಒಂದು ಸೇತುವೆಯನ್ನು ನಿರ್ಮಿಸಲಾಗುವುದು. ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳೆಲ್ಲರೂ ಆ ಸೇತುವೆಯನ್ನು ದಾಟಲು ಪ್ರಯತ್ನಿಸುವರು. ಸತ್ಯವಿಶ್ವಾಸಿಗಳು ತಮ್ಮ ತಮ್ಮ ಕರ್ಮಗಳಿಗೆ ಅನುಗುಣವಾಗಿ ಆ ಸೇತುವೆಯನ್ನು ದಾಟುವರು. ಕೆಲವರು ಕಣ್ಣೆವೆಯಿಕ್ಕುವ ವೇಗದಲ್ಲಿ, ಕೆಲವರು ಮಿಂಚಿನ ವೇಗದಲ್ಲಿ, ಕೆಲವರು ಹಕ್ಕಿ ಹಾರುವ ವೇಗದಲ್ಲಿ, ಕೆಲವರು ಕುದುರೆಗಳ ವೇಗದಲ್ಲಿ ದಾಟುವರು. ದುಷ್ಕರ್ಮಿಗಳಾದ ಸತ್ಯವಿಶ್ವಾಸಿಗಳು ದಾಟಲು ಸಾಧ್ಯವಾಗದೆ ನರಕದಲ್ಲಿ ಬೀಳುವರು. ಅವರನ್ನು ನಂತರ ಶಿಫಾರಸು ಮಾಡುವ ಮೂಲಕ ಅಥವಾ ಅವರ ಶಿಕ್ಷೆ ಮುಗಿದ ಬಳಿಕ ನರಕದಿಂದ ಪಾರು ಮಾಡಲಾಗುವುದು. ಆದರೆ ಸತ್ಯನಿಷೇಧಿಗಳಿಗೆ ಆ ಸೇತುವೆಯನ್ನು ದಾಟಲು ಸಾಧ್ಯವಾಗದೆ ಎಲ್ಲರೂ ನರಕದಲ್ಲಿ ಬೀಳುವರು. ಅದರಲ್ಲೇ ಶಾಶ್ವತವಾಗಿ ವಾಸಿಸುವರು.
[1] ಮಕ್ಕಾದಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ಪೈಕಿ ಅತ್ಯಧಿಕ ಸ್ಥಾನಮಾನ ಮತ್ತು ಜನಬಲವುಳ್ಳವರು ಯಾರೆಂದು ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಾ ಸತ್ಯನಿಷೇಧಿಗಳು ಕೇಳುತ್ತಿದ್ದರು. ಏಕೆಂದರೆ, ಮಕ್ಕಾದ ಮುಖಂಡರು ಮತ್ತು ಶ್ರೀಮಂತರಲ್ಲಿ ಹೆಚ್ಚಿನವರೂ ಸತ್ಯನಿಷೇಧಿಗಳಾಗಿದ್ದರು.