[1] ಕುರೈಷರ ವ್ಯಾಪಾರ ತಂಡವನ್ನು (ನಿಶ್ಶಸ್ತ್ರ ಗುಂಪನ್ನು) ಅಥವಾ ಕುರೈಷ್ ಸೈನ್ಯವನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತು ಕೊಟ್ಟಿದ್ದನು. ಕುರೈಷರ ವ್ಯಾಪಾರ ತಂಡದ ಮೇಲೆ ದಾಳಿ ಮಾಡಿ ವಶಪಡಿಸುವುದಕ್ಕೆ ಯುದ್ಧದ ಅಗತ್ಯವಿಲ್ಲದ್ದರಿಂದ ಮುಸಲ್ಮಾನರು ಅದನ್ನೇ ಬಯಸಿದ್ದರು. ಆದರೆ ಅಲ್ಲಾಹನ ಉದ್ದೇಶವು ಸತ್ಯ ಮತ್ತು ಅಸತ್ಯವನ್ನು ನಿರ್ಣಾಯಕವಾಗಿ ಬೇರ್ಪಡಿಸಿ ತೋರಿಸುವ ಬದ್ರ್ ಯುದ್ಧ ನಡೆಯಬೇಕು ಎಂಬುದಾಗಿತ್ತು.