[1] ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಎರಡು ಮಹಾ ಸಾಮ್ರಾಜ್ಯಗಳು ಅಸ್ತಿತ್ವದಲ್ಲಿದ್ದವು. ರೋಮನ್ ಸಾಮ್ರಾಜ್ಯ ಮತ್ತು ಪರ್ಶಿಯನ್ ಸಾಮ್ರಾಜ್ಯ. ಪರ್ಶಿಯನ್ನರು ಅಗ್ನಿಪೂಜಕರಾಗಿದ್ದರು ಮತ್ತು ರೋಮನ್ನರು ಅಹ್ಲೆ ಕಿತಾಬ್ (ಗ್ರಂಥ ನೀಡಲಾದವರು) ಆಗಿದ್ದರು. ಮಕ್ಕಾದ ಬಹುದೇವಾರಾಧಕರು ಪರ್ಶಿಯನ್ನರನ್ನು ಬೆಂಬಲಿಸುತ್ತಿದ್ದರು. ಏಕೆಂದರೆ ಅವರು ವಿಶ್ವಾಸ-ಆಚಾರಗಳಲ್ಲಿ ಸಾಮ್ಯತೆಯಿತ್ತು. ಮುಸಲ್ಮಾನರು ರೋಮನ್ನರ ಪರವಾಗಿದ್ದರು. ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿಯಾದ ಕೆಲವೇ ವರ್ಷಗಳಲ್ಲಿ ಪರ್ಶಿಯನ್ನರು ರೋಮನ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸಿದರು. ಇದರಿಂದ ಮಕ್ಕಾದ ಬಹುದೇವರಾಧಕರು ಹಿರಿ-ಹಿರಿ ಹಿಗ್ಗುತ್ತಾ ಮುಸ್ಲಿಮರನ್ನು ಮೂದಲಿಸತೊಡಗಿದರು. ಆಗ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು.
[1] ಅಂದರೆ ಮೂರರಿಂದ ಒಂಬತ್ತು ವರ್ಷಗಳೊಳಗೆ. ಕುರ್ಆನ್ನ ಈ ಭವಿಷ್ಯ ನುಡಿ ಸತ್ಯವಾಯಿತು. ಏಳು ವರ್ಷಗಳಲ್ಲಿ ರೋಮನ್ನರು ಪರ್ಶಿಯನ್ನರನ್ನು ಸೋಲಿಸಿ ತಮ್ಮ ಪ್ರದೇಶಗಳನ್ನು ಮರಳಿ ವಶಪಡಿಸಿದರು.