আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

পৃষ্ঠা নং:close

external-link copy
133 : 3

وَسَارِعُوْۤا اِلٰی مَغْفِرَةٍ مِّنْ رَّبِّكُمْ وَجَنَّةٍ عَرْضُهَا السَّمٰوٰتُ وَالْاَرْضُ ۙ— اُعِدَّتْ لِلْمُتَّقِیْنَ ۟ۙ

ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಗಾಗಿ ಮತ್ತು ಭೂಮ್ಯಾಕಾಶಗಳಷ್ಟು ವಿಶಾಲವಾದ ಸ್ವರ್ಗಕ್ಕಾಗಿ ತ್ವರೆಯಿಂದ ಮುನ್ನುಗ್ಗಿರಿ. ಅದನ್ನು ದೇವಭಯವುಳ್ಳವರಿಗಾಗಿ ಸಿದ್ಧಗೊಳಿಸಲಾಗಿದೆ. info
التفاسير:

external-link copy
134 : 3

الَّذِیْنَ یُنْفِقُوْنَ فِی السَّرَّآءِ وَالضَّرَّآءِ وَالْكٰظِمِیْنَ الْغَیْظَ وَالْعَافِیْنَ عَنِ النَّاسِ ؕ— وَاللّٰهُ یُحِبُّ الْمُحْسِنِیْنَ ۟ۚ

ಅವರು (ದೇವಭಯವುಳ್ಳವರು) ಯಾರೆಂದರೆ, ಸುಖದಲ್ಲೂ ಕಷ್ಟದಲ್ಲೂ ದಾನ ಮಾಡುವವರು, ಕೋಪವನ್ನು ನಿಗ್ರಹಿಸುವವರು ಮತ್ತು ಜನರಿಗೆ ಮನ್ನಿಸುವವರು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ. info
التفاسير:

external-link copy
135 : 3

وَالَّذِیْنَ اِذَا فَعَلُوْا فَاحِشَةً اَوْ ظَلَمُوْۤا اَنْفُسَهُمْ ذَكَرُوا اللّٰهَ فَاسْتَغْفَرُوْا لِذُنُوْبِهِمْ۫— وَمَنْ یَّغْفِرُ الذُّنُوْبَ اِلَّا اللّٰهُ ۪۫— وَلَمْ یُصِرُّوْا عَلٰی مَا فَعَلُوْا وَهُمْ یَعْلَمُوْنَ ۟

ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು? ಅವರು ತಿಳಿದೂ ಸಹ (ಕೆಟ್ಟ) ಕಾರ್ಯಗಳಲ್ಲಿ ಹಟ ಹಿಡಿದು ಮುಂದುವರಿಯುವುದಿಲ್ಲ. info
التفاسير:

external-link copy
136 : 3

اُولٰٓىِٕكَ جَزَآؤُهُمْ مَّغْفِرَةٌ مِّنْ رَّبِّهِمْ وَجَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَنِعْمَ اَجْرُ الْعٰمِلِیْنَ ۟ؕ

ಅವರಿಗಿರುವ ಪ್ರತಿಫಲವು ಅವರ ಪರಿಪಾಲಕನ ಕಡೆಯ ಕ್ಷಮೆ ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಸತ್ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲವು ಬಹಳ ಉತ್ತಮವಾಗಿದೆ! info
التفاسير:

external-link copy
137 : 3

قَدْ خَلَتْ مِنْ قَبْلِكُمْ سُنَنٌ ۙ— فَسِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الْمُكَذِّبِیْنَ ۟

ನಿಮಗಿಂತ ಮುಂಚೆಯೂ ಇಂತಹ ಘಟನೆಗಳು ಗತಿಸಿ ಹೋಗಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿರಿ.[1] info

[1] ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ಲಾ ಬಿನ್ ಜುಬೈರ್ ರವರ ನಾಯಕತ್ವದಲ್ಲಿ ಬಿಲ್ಲುಗಾರರ ಸೇನೆಯನ್ನು ಒಂದು ಗುಡ್ಡದ ಮೇಲೆ ನಿಲ್ಲಿಸಿದ್ದರು. ಯುದ್ಧದಲ್ಲಿ ಗೆದ್ದರೂ ಸೋತರೂ ನೀವು ಗುಡ್ಡದಿಂದ ಇಳಿದು ಬರಬಾರದೆಂದು ಅವರಿಗೆ ಕಟ್ಟಾಜ್ಞೆ ನೀಡಿದ್ದರು. ಆದರೆ ಯುದ್ಧದ ಆರಂಭದಲ್ಲಿ ಮುಸಲ್ಮಾನರು ವೈರಿಗಳನ್ನು ಹಿಮ್ಮೆಟ್ಟಿಸುವದರಲ್ಲಿ ಯಶಸ್ವಿಯಾಗಿ ಅವರು ಬಿಟ್ಟು ಹೋದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಲು ತೊಡಗಿದಾಗ ಗುಡ್ಡ ಮೇಲಿದ್ದ ಬಿಲ್ಲುಗಾರರಲ್ಲಿ ಭಿನ್ನಮತ ಉಂಟಾಯಿತು. ಕೆಲವರು ಹೇಳಿದರು: ಯುದ್ಧದಲ್ಲಿ ಗೆಲ್ಲುವವರೆಗೆ ಮಾತ್ರ ಇಲ್ಲಿ ನಿಲ್ಲಲು ನಮಗೆ ಆಜ್ಞಾಪಿಸಲಾಗಿದೆ. ನಾವು ಈಗ ಗೆದ್ದಿದ್ದೇವೆ ಮತ್ತು ವೈರಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಆದ್ದರಿಂದ ನಾವು ಇನ್ನು ಇಲ್ಲಿ ನಿಲ್ಲಬೇಕಾಗಿಲ್ಲ. ಕೇವಲ ಹತ್ತು ಜನರ ಹೊರತು ಉಳಿದವರೆಲ್ಲರೂ ಗುಡ್ಡದಿಂದ ಇಳಿದು ಹೋದರು. ಗುಡ್ಡದಲ್ಲಿ ಬಿಲ್ಲುಗಾರರು ಇಲ್ಲದಿರುವುದನ್ನು ನೋಡಿದ ವೈರಿಗಳನ್ನು ಆ ಅವಕಾಶವನ್ನು ಚೆನ್ನಾಗಿ ಬಳಸಿ ಅಶ್ವಸೇನೆಯ ಮೂಲಕ ಹಿಂಬದಿಯಿಂದ ಆಕ್ರಮಣ ಮಾಡಿದರು. ಈ ಅನಿರೀಕ್ಷಿತ ಆಕ್ರಮಣದಿಂದ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಈ ವಚನದಲ್ಲಿ ಹೇಳುವುದೇನೆಂದರೆ, ಸತ್ಯನಿಷೇಧಿಗಳಿಗೆ ಕೆಲವೊಮ್ಮೆ ಗೆಲುವು ಸಿಗಬಹುದು. ಆದರೆ ಅದರಿಂದ ನೀವು ಧೃತಿಗೆಡಬಾರದು. ಏಕೆಂದರೆ ಅಂತಿಮ ವಿಜಯವು ಸತ್ಯವಿಶ್ವಾಸಿಗಳಿಗೇ ಆಗಿದೆ.

التفاسير:

external-link copy
138 : 3

هٰذَا بَیَانٌ لِّلنَّاسِ وَهُدًی وَّمَوْعِظَةٌ لِّلْمُتَّقِیْنَ ۟

ಇದು (ಕುರ್‌ಆನ್) ಮನುಷ್ಯರಿಗೆ ಒಂದು ಸ್ಪಷ್ಟ ವಿವರಣೆಯಾಗಿದೆ. ದೇವಭಯವುಳ್ಳವರಿಗೆ ಸನ್ಮಾರ್ಗ ಮತ್ತು ಹಿತೋಪದೇಶವಾಗಿದೆ. info
التفاسير:

external-link copy
139 : 3

وَلَا تَهِنُوْا وَلَا تَحْزَنُوْا وَاَنْتُمُ الْاَعْلَوْنَ اِنْ كُنْتُمْ مُّؤْمِنِیْنَ ۟

ನೀವು ದುರ್ಬಲರಾಗಬೇಡಿ ಮತ್ತು ದುಃಖಿಸಬೇಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನೀವೇ ಅತಿಶ್ರೇಷ್ಠರು. info
التفاسير:

external-link copy
140 : 3

اِنْ یَّمْسَسْكُمْ قَرْحٌ فَقَدْ مَسَّ الْقَوْمَ قَرْحٌ مِّثْلُهٗ ؕ— وَتِلْكَ الْاَیَّامُ نُدَاوِلُهَا بَیْنَ النَّاسِ ۚ— وَلِیَعْلَمَ اللّٰهُ الَّذِیْنَ اٰمَنُوْا وَیَتَّخِذَ مِنْكُمْ شُهَدَآءَ ؕ— وَاللّٰهُ لَا یُحِبُّ الظّٰلِمِیْنَ ۟ۙ

ನಿಮಗೆ ಗಾಯಗಳಾಗಿದ್ದರೆ, ಆ ಜನರಿಗೂ (ಎದುರಾಳಿಗಳಿಗೂ) ಗಾಯಗಳಾಗಿದ್ದವು. ಸತ್ಯವಿಶ್ವಾಸಿಗಳು ಯಾರೆಂದು ಅಲ್ಲಾಹು ತಿಳಿಯುವುದಕ್ಕಾಗಿ ಮತ್ತು ನಿಮ್ಮಲ್ಲಿ ಕೆಲವರನ್ನು ಅವನು ಹುತಾತ್ಮರಾಗಿ ಸ್ವೀಕರಿಸುವುದಕ್ಕಾಗಿ, ನಾವು ಆ ದಿನಗಳನ್ನು (ಸೋಲು-ಗೆಲುವುಗಳನ್ನು) ಜನರ ನಡುವೆ ಬದಲಾಯಿಸುತ್ತೇವೆ. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ. info
التفاسير: